<p>ತಿರುಪತಿ ಸಮೀಪದ ಲಕ್ಷ್ಮಿಗಾರಿಪಳ್ಳೆ ಎಂಬ ಪುಟ್ಟ ಹಳ್ಳಿಗೆ ಕಾಲಿಟ್ಟಾಗ ಮೊದಲು ಗಮನ ಸೆಳೆಯುವುದು ಮರದ ಸುವಾಸನೆ. ಆ ಸುವಾಸನೆ ಸಾಮಾನ್ಯ ಮರದ್ದಲ್ಲ; ಅದರಲ್ಲಿ ಹಳೆಯ ಸಂಪ್ರದಾಯದ ನೆನಪು, ಕೈಚಳಕದ ಕಲೆ ಮತ್ತು ಮಣ್ಣಿನ ಬದುಕಿನ ಆತ್ಮ ಮಿಶ್ರವಾಗಿದೆ. ಮನೆಯ ಮುಂಭಾಗದಲ್ಲಿ ಕುಳಿತ ಕಲಾವಿದರ ಕೈಯಲ್ಲಿ ಮರದ ತುಂಡು ನಿಧಾನವಾಗಿ ರೂಪ ಪಡೆಯುತ್ತಿರುತ್ತದೆ. ಕೆಲವೇ ಕ್ಷಣಗಳಲ್ಲಿ ಅದು ರಾಜನ ಮುಖ, ರಾಣಿಯ ಕಣ್ಣಿನ ಭಾವ ಅಥವಾ ಕೃಷ್ಣನ ಮೂರ್ತಿಯಾಗಿ ಅರಳುತ್ತದೆ. ನೋಡುತ್ತಾ ಹೋದರೆ, ಮರಕ್ಕೆ ಜೀವ ಬಂದಂತೆಯೇ ಭಾಸವಾಗುತ್ತದೆ.</p>.<p>ಒಮ್ಮೆ ಕರ್ನಾಟಕದ ಮನೆಮನೆಗಳಲ್ಲೂ ಮದುವೆ ಸಂಪ್ರದಾಯಗಳಲ್ಲೂ ವಿಶೇಷ ಸ್ಥಾನ ಪಡೆದಿದ್ದ ರಾಜ–ರಾಣಿಯರ ಪಟ್ಟದ ಗೊಂಬೆಗಳು ಇಂದು ಇಲ್ಲಿನ ಕಲಾವಿದರ ಕೈಯಲ್ಲಿ ಮತ್ತೆ ಜೀವ ಪಡೆದಿವೆ. ಶ್ರೀಗಂಧದ ಮರದಲ್ಲಿ ತಯಾರಾಗುತ್ತಿದ್ದ ಈ ಗೊಂಬೆಗಳು ಕಾಲದ ಹೊಡೆತಕ್ಕೆ ಕರ್ನಾಟಕದಲ್ಲಿ ಕ್ಷೀಣಿಸಿದರೂ, ಗಡಿಯಾಚೆ ಆಂಧ್ರಪ್ರದೇಶದಲ್ಲಿ ಜೀವ ಪಡೆದುಕೊಂಡಿರುವುದು ವಿಶೇಷ.</p>.<p>ತಮಿಳುನಾಡಿನ ವೇಲೂರಿನಿಂದ ಹಲವು ದಶಕಗಳ ಹಿಂದೆ ವಲಸೆ ಬಂದ ಸುಮಾರು 150 ಕುಟುಂಬಗಳು ಲಕ್ಷ್ಮಿಗಾರಿಪಳ್ಳೆಯಲ್ಲಿ ನೆಲೆಸಿ ಈ ಕೌಶಲ್ಯವನ್ನು ಉಳಿಸಿಕೊಂಡಿವೆ. ತಾತ–ಮುತ್ತಾತರಿಂದ ಬಂದ ಈ ಪರಂಪರೆಯನ್ನು ಇವರು ಕೇವಲ ಉದ್ಯೋಗವಾಗಿ ಅಲ್ಲ, ಬದುಕಿನ ಭಾಗವಾಗಿಯೇ ನೋಡುತ್ತಾರೆ.</p>.<p>65 ವರ್ಷದ ವೇಲ್ಲೂರು ಶಂಕರ ಅವರು ನಾಲ್ಕನೇ ತಲೆಮಾರಿನ ಕಲಾವಿದ. ಮರದ ತುಂಡನ್ನು ಕೈಯಲ್ಲಿ ಹಿಡಿದುಕೊಂಡು, ಯಾವುದೇ ಸ್ಕೆಚ್ ಇಲ್ಲದೆ ನೇರವಾಗಿ ಕೆತ್ತನೆ ಆರಂಭಿಸುವ ಅವರ ಕೌಶಲ ಗಮನ ಸೆಳೆಯುತ್ತದೆ. ಕಣ್ಣು, ಮೂಗು, ತುಟಿ, ಆಭರಣಗಳ ವಿನ್ಯಾಸ–ಎಲ್ಲವೂ ಕೇವಲ ಅನುಭವದ ಅಳತೆಯಲ್ಲಿ ಮೂಡಿಬರುತ್ತವೆ.</p>.<p>‘ಮೊದಲು ಶ್ರೀಗಂಧದ ಮರದಲ್ಲೇ ಗೊಂಬೆ ಮಾಡುತ್ತಿದ್ದೆವು. ಈಗ ಶ್ರೀಗಂಧದ ಮರ ಸಿಗುವುದೇ ಕಷ್ಟ. ಆದ್ದರಿಂದ ತೇಗ, ಹಾಲುಮರ, ಪಗಡ, ಬೆಪ್ಪಾಲೆ ಮರ ಬಳಸುತ್ತೇವೆ’ ಎಂದು ಶಂಕರ ಹೇಳುತ್ತಾರೆ.</p>.<p>ಅವರ ಸುತ್ತ ಸಾಲಾಗಿ ನಿಂತಿರುವ ರಾಜ–ರಾಣಿಯರ ಗೊಂಬೆಗಳು, ವೆಂಕಟೇಶ್ವರ ಸ್ವಾಮಿ, ಕೃಷ್ಣ–ರಾಧೆ, ರಾಮ–ಸೀತೆ, ದಶಾವತಾರ, ಆಂಜನೇಯ ಮೂರ್ತಿಗಳು ಪುಟ್ಟ ಕಲಾ ಸಂಗ್ರಹಾಲಯದ ಅನುಭವ ನೀಡುತ್ತವೆ. ಕೆಲವು ಎರಡು ಇಂಚು ಎತ್ತರದಲ್ಲಿದ್ದರೆ, ಕೆಲವು ಎರಡು ಅಡಿ ಎತ್ತರದವರೆಗೂ ಕಾಣುತ್ತವೆ. ಪ್ರತಿಯೊಂದು ಗೊಂಬೆಯಲ್ಲೂ ಸೂಕ್ಷ್ಮ ಕುಸುರಿ ಕೆಲಸ ಸ್ಪಷ್ಟವಾಗಿರುತ್ತದೆ.</p>.<p>ಈ ಪಟ್ಟದ ಗೊಂಬೆಗಳ ಹಿಂದೆ ಕೇವಲ ಅಲಂಕಾರದ ಕಥೆಯಿಲ್ಲ; ಒಂದು ಸಂಸ್ಕೃತಿಯ ನೆನಪು ಅಡಗಿದೆ. ಒಂದು ಕಾಲದಲ್ಲಿ ಸಾಮಾನ್ಯ ಜನರಿಗೆ ರಾಜ–ಮಹಾರಾಜರನ್ನು ನೋಡುವ ಅವಕಾಶವೇ ಇರಲಿಲ್ಲ. ಹೀಗಾಗಿ ರಾಜ–ರಾಣಿಯರ ಗೊಂಬೆಗಳನ್ನು ಅವರ ಪ್ರತಿರೂಪವಾಗಿ ಭಾವಿಸಲಾಗುತ್ತಿತ್ತು. ಮದುವೆಯಾದ ನವದಂಪತಿಗೆ ಈ ಗೊಂಬೆಗಳನ್ನು ಉಡುಗೊರೆಯಾಗಿ ನೀಡಿ, ‘ರಾಜ–ಮಹಾರಾಣಿಯಂತೆ ಸುಖವಾಗಿ ಬದುಕಲಿ’ ಎಂದು ಆಶೀರ್ವದಿಸುವ ಪದ್ಧತಿ ರೂಢಿಯಲ್ಲಿತ್ತು. ಆ ಸಂಪ್ರದಾಯ ಇಂದಿಗೂ ಕೆಲವು ಮನೆಗಳಲ್ಲಿ ಮುಂದುವರಿದಿದೆ.</p>.<p>ಇಂದು ಈ ಗೊಂಬೆಗಳಿಗೆ ದೇಶ–ವಿದೇಶಗಳಿಂದ ಬೇಡಿಕೆ ಬರುತ್ತಿದೆ. ವಿದೇಶದಲ್ಲಿರುವ ಭಾರತೀಯ ಕುಟುಂಬಗಳು ವಿಶೇಷವಾಗಿ ಈ ಗೊಂಬೆಗಳನ್ನು ತರಿಸಿಕೊಳ್ಳುತ್ತವೆ. ಮೈಸೂರು, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೇರಳ, ಪುದುಚೆರಿ ಸೇರಿದಂತೆ ಅನೇಕ ಕಡೆಗಳಿಂದ ವ್ಯಾಪಾರಿಗಳು ಇಲ್ಲಿಗೆ ಬಂದು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುತ್ತಾರೆ.</p>.<p>ಆದರೆ ಈ ಕಲೆಯ ಮುಂದಿನ ದಾರಿ ಅಷ್ಟು ಸುಲಭವಿಲ್ಲ. ತಂತ್ರಜ್ಞಾನದ ಯುಗದಲ್ಲಿ ಯುವಕರು ಬೇರೆ ಉದ್ಯೋಗಗಳತ್ತ ಮುಖ ಮಾಡುತ್ತಿದ್ದಾರೆ. ಗಂಟೆಗಟ್ಟಲೆ ಕುಳಿತು ಸೂಕ್ಷ್ಮ ಕೆತ್ತನೆ ಮಾಡುವ ಸಹನೆ ಈಗ ಕಡಿಮೆಯಾಗುತ್ತಿದೆ.</p>.<p>35 ವರ್ಷದ ಜೈಶಂಕರ ಈ ಕಲೆಯ ಉಳಿವಿಗಾಗಿ ತಮ್ಮದೇ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ‘ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿ ಬೆಂಗಳೂರಿನಲ್ಲಿ ಉತ್ತಮ ಸಂಬಳದ ಕೆಲಸ ಮಾಡುತ್ತಿದ್ದೆ. ಆದರೆ ನಮ್ಮ ಮನೆಯ ಕಲೆ ಕಣ್ಮರೆಯಾಗಬಾರದು ಎಂದು ವಾಪಸ್ ಬಂದೆ’ ಎಂದು ಅವರು ಹೇಳುತ್ತಾರೆ.</p>.<p>ಅವರ ಮಾತುಗಳಲ್ಲಿ ಕಲೆಯ ಬಗ್ಗೆ ಇರುವ ಹೆಮ್ಮೆ ಸ್ಪಷ್ಟವಾಗುತ್ತದೆ. ‘ಈ ಕಲೆಗೆ ಜಾತಿ–ಮತಗಳಿಲ್ಲ. ಯಾರಿಗೆ ಆಸಕ್ತಿ ಇದೆಯೋ ಅವರಿಗೆ ನಾವು ಉಚಿತವಾಗಿ ಕಲಿಸುತ್ತೇವೆ. ಮುಂದಿನ ತಲೆಮಾರಿಗೂ ಈ ಕೈಚಳಕ ತಲುಪಬೇಕು’ ಎಂದು ಅವರು ಹೇಳುತ್ತಾರೆ.</p>.<p>ಒಮ್ಮೆ ಕರ್ನಾಟಕದ ಸಂಪ್ರದಾಯದ ಭಾಗವಾಗಿದ್ದ ರಾಜ–ರಾಣಿಯರ ಗೊಂಬೆಗಳು ಇಂದು ಗಡಿಯಾಚೆ ಮತ್ತೊಂದು ರಾಜ್ಯದಲ್ಲಿ ಜೀವಂತವಾಗಿರುವುದು ವಿಪರ್ಯಾಸ. ಆದರೆ ಆ ಗೊಂಬೆಗಳ ಕಣ್ಣುಗಳಲ್ಲಿ ಇನ್ನೂ ಅದೇ ನವಿರಾದ ಭಾವ ಇದೆ; ಮರದ ಮೇಲಿನ ಅದೇ ಸೂಕ್ಷ್ಮ ಕೆತ್ತನೆ ಇದೆ; ಮತ್ತು ಕಲಾವಿದರ ಕೈಯಲ್ಲಿ ಇನ್ನೂ ಅದೇ ಪ್ರೀತಿ ಉಳಿದಿದೆ.</p>.<p>ಮರದ ತುಂಡಿನಲ್ಲಿ ರಾಜರ ರೂಪ ಮೂಡಿಸುವ ಈ ಕಲಾವಿದರು ಕೇವಲ ಗೊಂಬೆಗಳನ್ನು ಮಾಡುತ್ತಿಲ್ಲ; ಒಂದು ಕಾಲದ ಸಂಸ್ಕೃತಿಯ ನೆನಪುಗಳನ್ನು ಮುಂದಿನ ತಲೆಮಾರಿಗೆ ಸಾಗಿಸುತ್ತಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-51-391074890</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿರುಪತಿ ಸಮೀಪದ ಲಕ್ಷ್ಮಿಗಾರಿಪಳ್ಳೆ ಎಂಬ ಪುಟ್ಟ ಹಳ್ಳಿಗೆ ಕಾಲಿಟ್ಟಾಗ ಮೊದಲು ಗಮನ ಸೆಳೆಯುವುದು ಮರದ ಸುವಾಸನೆ. ಆ ಸುವಾಸನೆ ಸಾಮಾನ್ಯ ಮರದ್ದಲ್ಲ; ಅದರಲ್ಲಿ ಹಳೆಯ ಸಂಪ್ರದಾಯದ ನೆನಪು, ಕೈಚಳಕದ ಕಲೆ ಮತ್ತು ಮಣ್ಣಿನ ಬದುಕಿನ ಆತ್ಮ ಮಿಶ್ರವಾಗಿದೆ. ಮನೆಯ ಮುಂಭಾಗದಲ್ಲಿ ಕುಳಿತ ಕಲಾವಿದರ ಕೈಯಲ್ಲಿ ಮರದ ತುಂಡು ನಿಧಾನವಾಗಿ ರೂಪ ಪಡೆಯುತ್ತಿರುತ್ತದೆ. ಕೆಲವೇ ಕ್ಷಣಗಳಲ್ಲಿ ಅದು ರಾಜನ ಮುಖ, ರಾಣಿಯ ಕಣ್ಣಿನ ಭಾವ ಅಥವಾ ಕೃಷ್ಣನ ಮೂರ್ತಿಯಾಗಿ ಅರಳುತ್ತದೆ. ನೋಡುತ್ತಾ ಹೋದರೆ, ಮರಕ್ಕೆ ಜೀವ ಬಂದಂತೆಯೇ ಭಾಸವಾಗುತ್ತದೆ.</p>.<p>ಒಮ್ಮೆ ಕರ್ನಾಟಕದ ಮನೆಮನೆಗಳಲ್ಲೂ ಮದುವೆ ಸಂಪ್ರದಾಯಗಳಲ್ಲೂ ವಿಶೇಷ ಸ್ಥಾನ ಪಡೆದಿದ್ದ ರಾಜ–ರಾಣಿಯರ ಪಟ್ಟದ ಗೊಂಬೆಗಳು ಇಂದು ಇಲ್ಲಿನ ಕಲಾವಿದರ ಕೈಯಲ್ಲಿ ಮತ್ತೆ ಜೀವ ಪಡೆದಿವೆ. ಶ್ರೀಗಂಧದ ಮರದಲ್ಲಿ ತಯಾರಾಗುತ್ತಿದ್ದ ಈ ಗೊಂಬೆಗಳು ಕಾಲದ ಹೊಡೆತಕ್ಕೆ ಕರ್ನಾಟಕದಲ್ಲಿ ಕ್ಷೀಣಿಸಿದರೂ, ಗಡಿಯಾಚೆ ಆಂಧ್ರಪ್ರದೇಶದಲ್ಲಿ ಜೀವ ಪಡೆದುಕೊಂಡಿರುವುದು ವಿಶೇಷ.</p>.<p>ತಮಿಳುನಾಡಿನ ವೇಲೂರಿನಿಂದ ಹಲವು ದಶಕಗಳ ಹಿಂದೆ ವಲಸೆ ಬಂದ ಸುಮಾರು 150 ಕುಟುಂಬಗಳು ಲಕ್ಷ್ಮಿಗಾರಿಪಳ್ಳೆಯಲ್ಲಿ ನೆಲೆಸಿ ಈ ಕೌಶಲ್ಯವನ್ನು ಉಳಿಸಿಕೊಂಡಿವೆ. ತಾತ–ಮುತ್ತಾತರಿಂದ ಬಂದ ಈ ಪರಂಪರೆಯನ್ನು ಇವರು ಕೇವಲ ಉದ್ಯೋಗವಾಗಿ ಅಲ್ಲ, ಬದುಕಿನ ಭಾಗವಾಗಿಯೇ ನೋಡುತ್ತಾರೆ.</p>.<p>65 ವರ್ಷದ ವೇಲ್ಲೂರು ಶಂಕರ ಅವರು ನಾಲ್ಕನೇ ತಲೆಮಾರಿನ ಕಲಾವಿದ. ಮರದ ತುಂಡನ್ನು ಕೈಯಲ್ಲಿ ಹಿಡಿದುಕೊಂಡು, ಯಾವುದೇ ಸ್ಕೆಚ್ ಇಲ್ಲದೆ ನೇರವಾಗಿ ಕೆತ್ತನೆ ಆರಂಭಿಸುವ ಅವರ ಕೌಶಲ ಗಮನ ಸೆಳೆಯುತ್ತದೆ. ಕಣ್ಣು, ಮೂಗು, ತುಟಿ, ಆಭರಣಗಳ ವಿನ್ಯಾಸ–ಎಲ್ಲವೂ ಕೇವಲ ಅನುಭವದ ಅಳತೆಯಲ್ಲಿ ಮೂಡಿಬರುತ್ತವೆ.</p>.<p>‘ಮೊದಲು ಶ್ರೀಗಂಧದ ಮರದಲ್ಲೇ ಗೊಂಬೆ ಮಾಡುತ್ತಿದ್ದೆವು. ಈಗ ಶ್ರೀಗಂಧದ ಮರ ಸಿಗುವುದೇ ಕಷ್ಟ. ಆದ್ದರಿಂದ ತೇಗ, ಹಾಲುಮರ, ಪಗಡ, ಬೆಪ್ಪಾಲೆ ಮರ ಬಳಸುತ್ತೇವೆ’ ಎಂದು ಶಂಕರ ಹೇಳುತ್ತಾರೆ.</p>.<p>ಅವರ ಸುತ್ತ ಸಾಲಾಗಿ ನಿಂತಿರುವ ರಾಜ–ರಾಣಿಯರ ಗೊಂಬೆಗಳು, ವೆಂಕಟೇಶ್ವರ ಸ್ವಾಮಿ, ಕೃಷ್ಣ–ರಾಧೆ, ರಾಮ–ಸೀತೆ, ದಶಾವತಾರ, ಆಂಜನೇಯ ಮೂರ್ತಿಗಳು ಪುಟ್ಟ ಕಲಾ ಸಂಗ್ರಹಾಲಯದ ಅನುಭವ ನೀಡುತ್ತವೆ. ಕೆಲವು ಎರಡು ಇಂಚು ಎತ್ತರದಲ್ಲಿದ್ದರೆ, ಕೆಲವು ಎರಡು ಅಡಿ ಎತ್ತರದವರೆಗೂ ಕಾಣುತ್ತವೆ. ಪ್ರತಿಯೊಂದು ಗೊಂಬೆಯಲ್ಲೂ ಸೂಕ್ಷ್ಮ ಕುಸುರಿ ಕೆಲಸ ಸ್ಪಷ್ಟವಾಗಿರುತ್ತದೆ.</p>.<p>ಈ ಪಟ್ಟದ ಗೊಂಬೆಗಳ ಹಿಂದೆ ಕೇವಲ ಅಲಂಕಾರದ ಕಥೆಯಿಲ್ಲ; ಒಂದು ಸಂಸ್ಕೃತಿಯ ನೆನಪು ಅಡಗಿದೆ. ಒಂದು ಕಾಲದಲ್ಲಿ ಸಾಮಾನ್ಯ ಜನರಿಗೆ ರಾಜ–ಮಹಾರಾಜರನ್ನು ನೋಡುವ ಅವಕಾಶವೇ ಇರಲಿಲ್ಲ. ಹೀಗಾಗಿ ರಾಜ–ರಾಣಿಯರ ಗೊಂಬೆಗಳನ್ನು ಅವರ ಪ್ರತಿರೂಪವಾಗಿ ಭಾವಿಸಲಾಗುತ್ತಿತ್ತು. ಮದುವೆಯಾದ ನವದಂಪತಿಗೆ ಈ ಗೊಂಬೆಗಳನ್ನು ಉಡುಗೊರೆಯಾಗಿ ನೀಡಿ, ‘ರಾಜ–ಮಹಾರಾಣಿಯಂತೆ ಸುಖವಾಗಿ ಬದುಕಲಿ’ ಎಂದು ಆಶೀರ್ವದಿಸುವ ಪದ್ಧತಿ ರೂಢಿಯಲ್ಲಿತ್ತು. ಆ ಸಂಪ್ರದಾಯ ಇಂದಿಗೂ ಕೆಲವು ಮನೆಗಳಲ್ಲಿ ಮುಂದುವರಿದಿದೆ.</p>.<p>ಇಂದು ಈ ಗೊಂಬೆಗಳಿಗೆ ದೇಶ–ವಿದೇಶಗಳಿಂದ ಬೇಡಿಕೆ ಬರುತ್ತಿದೆ. ವಿದೇಶದಲ್ಲಿರುವ ಭಾರತೀಯ ಕುಟುಂಬಗಳು ವಿಶೇಷವಾಗಿ ಈ ಗೊಂಬೆಗಳನ್ನು ತರಿಸಿಕೊಳ್ಳುತ್ತವೆ. ಮೈಸೂರು, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೇರಳ, ಪುದುಚೆರಿ ಸೇರಿದಂತೆ ಅನೇಕ ಕಡೆಗಳಿಂದ ವ್ಯಾಪಾರಿಗಳು ಇಲ್ಲಿಗೆ ಬಂದು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುತ್ತಾರೆ.</p>.<p>ಆದರೆ ಈ ಕಲೆಯ ಮುಂದಿನ ದಾರಿ ಅಷ್ಟು ಸುಲಭವಿಲ್ಲ. ತಂತ್ರಜ್ಞಾನದ ಯುಗದಲ್ಲಿ ಯುವಕರು ಬೇರೆ ಉದ್ಯೋಗಗಳತ್ತ ಮುಖ ಮಾಡುತ್ತಿದ್ದಾರೆ. ಗಂಟೆಗಟ್ಟಲೆ ಕುಳಿತು ಸೂಕ್ಷ್ಮ ಕೆತ್ತನೆ ಮಾಡುವ ಸಹನೆ ಈಗ ಕಡಿಮೆಯಾಗುತ್ತಿದೆ.</p>.<p>35 ವರ್ಷದ ಜೈಶಂಕರ ಈ ಕಲೆಯ ಉಳಿವಿಗಾಗಿ ತಮ್ಮದೇ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ‘ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿ ಬೆಂಗಳೂರಿನಲ್ಲಿ ಉತ್ತಮ ಸಂಬಳದ ಕೆಲಸ ಮಾಡುತ್ತಿದ್ದೆ. ಆದರೆ ನಮ್ಮ ಮನೆಯ ಕಲೆ ಕಣ್ಮರೆಯಾಗಬಾರದು ಎಂದು ವಾಪಸ್ ಬಂದೆ’ ಎಂದು ಅವರು ಹೇಳುತ್ತಾರೆ.</p>.<p>ಅವರ ಮಾತುಗಳಲ್ಲಿ ಕಲೆಯ ಬಗ್ಗೆ ಇರುವ ಹೆಮ್ಮೆ ಸ್ಪಷ್ಟವಾಗುತ್ತದೆ. ‘ಈ ಕಲೆಗೆ ಜಾತಿ–ಮತಗಳಿಲ್ಲ. ಯಾರಿಗೆ ಆಸಕ್ತಿ ಇದೆಯೋ ಅವರಿಗೆ ನಾವು ಉಚಿತವಾಗಿ ಕಲಿಸುತ್ತೇವೆ. ಮುಂದಿನ ತಲೆಮಾರಿಗೂ ಈ ಕೈಚಳಕ ತಲುಪಬೇಕು’ ಎಂದು ಅವರು ಹೇಳುತ್ತಾರೆ.</p>.<p>ಒಮ್ಮೆ ಕರ್ನಾಟಕದ ಸಂಪ್ರದಾಯದ ಭಾಗವಾಗಿದ್ದ ರಾಜ–ರಾಣಿಯರ ಗೊಂಬೆಗಳು ಇಂದು ಗಡಿಯಾಚೆ ಮತ್ತೊಂದು ರಾಜ್ಯದಲ್ಲಿ ಜೀವಂತವಾಗಿರುವುದು ವಿಪರ್ಯಾಸ. ಆದರೆ ಆ ಗೊಂಬೆಗಳ ಕಣ್ಣುಗಳಲ್ಲಿ ಇನ್ನೂ ಅದೇ ನವಿರಾದ ಭಾವ ಇದೆ; ಮರದ ಮೇಲಿನ ಅದೇ ಸೂಕ್ಷ್ಮ ಕೆತ್ತನೆ ಇದೆ; ಮತ್ತು ಕಲಾವಿದರ ಕೈಯಲ್ಲಿ ಇನ್ನೂ ಅದೇ ಪ್ರೀತಿ ಉಳಿದಿದೆ.</p>.<p>ಮರದ ತುಂಡಿನಲ್ಲಿ ರಾಜರ ರೂಪ ಮೂಡಿಸುವ ಈ ಕಲಾವಿದರು ಕೇವಲ ಗೊಂಬೆಗಳನ್ನು ಮಾಡುತ್ತಿಲ್ಲ; ಒಂದು ಕಾಲದ ಸಂಸ್ಕೃತಿಯ ನೆನಪುಗಳನ್ನು ಮುಂದಿನ ತಲೆಮಾರಿಗೆ ಸಾಗಿಸುತ್ತಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-51-391074890</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>