<p>ಗಂಗಾವತಿ: ಕಾವ್ಯ ಅಂತರಂಗದ ಭಾಷೆ. ಅಂತರಂಗದಲ್ಲಿ ಚಿಂತನ, ಮಂಥನ ನಡೆದಾಗ ಮಾತ್ರ ಕವಿತೆ ಹುಟ್ಟುತ್ತದೆ. ಒಳಗಣ್ಣಿನಿಂದ ನೋಡಿ ರಚಿಸಿದಾಗ ಮಾತ್ರ ಭರವಸೆಯ ಕಾವ್ಯ ಸೃಷ್ಟಿಯಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.</p>.<p>ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘ ಕೊಪ್ಪಳ, ಶ್ರೀರಾಮನಗರ ಆರುಷಿ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಬಸವರಾಜ ಗೌಡನಬಾವಿ ಅವರ ಚೊಚ್ಚಲ ಕವನ ಸಂಕಲನ ‘ಅಕ್ಷರಗಳ ಬಿಕ್ಕಳಿಕೆ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕನ್ನಡ ಕಾವ್ಯ ಪರಂಪರೆ ಸಮೃದ್ಧವಾದುದು. ಯುವ ಕವಿಗಳು ವಿಭಿನ್ನ ಸಂವೇದನೆಗಳು ಅಭಿವ್ಯಕ್ತಿಸುತ್ತಿದ್ದಾರೆ. ಬಸವರಾಜ ಗೌಡನಬಾವಿ ಅವರ ‘ಅಕ್ಷರಗಳ ಬಿಕ್ಕಳಿಕೆ’ ಸಂಕಲನ ವಿಭಿನ್ನ ಸಂವೇದನೆ, ವಿನ್ಯಾಸದಿಂದ ಗಮನಸೆಳೆಯುತ್ತದೆ. ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರನ್ನು ಪ್ರೊತ್ಸಾಹಿಸುವಲ್ಲಿ ಮುನ್ನೆಲೆಯಲ್ಲಿದೆ’ ಎಂದರು.</p>.<p>ಸಾಹಿತ್ಯ ಅಕಾಡೆಮಿ ಸದಸ್ಯ ಚನ್ನಬಸಪ್ಪ ಚಿಲ್ಕರಾಗಿ ಮಾತನಾಡಿ, ಬಸವರಾಜ ಗೌಡನಬಾವಿ ಅವರ ಕವಿತೆಗಳು ಗಾಢವಾದ ಸಾಮಾಜಿಕ ಪ್ರಜ್ಞೆ ಹೊಂದಿವೆ ಎಂದರು.</p>.<p>ಮುಮ್ತಾಜ್ ಬೇಗಂ, ಕವಿ ಬಸವರಾಜ ಗೌಡನಬಾವಿ ಮಾತ ನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ,ವಿಜಯಲಕ್ಷ್ಮಿ ನಾರಿನಾಳ, ತಾಲ್ಲೂಕು ಕಸಾಪ ಅಧ್ಯಕ್ಷ ರುದ್ರೇಶ ಆರ್ಹಾಳ, ಉಮಾ ದೇವಿ, ಗುಂಡೂರು ಪವನ ಕುಮಾರ, ರವಿ ಹಾದಿಮನಿ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260422-35-33355760</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಂಗಾವತಿ: ಕಾವ್ಯ ಅಂತರಂಗದ ಭಾಷೆ. ಅಂತರಂಗದಲ್ಲಿ ಚಿಂತನ, ಮಂಥನ ನಡೆದಾಗ ಮಾತ್ರ ಕವಿತೆ ಹುಟ್ಟುತ್ತದೆ. ಒಳಗಣ್ಣಿನಿಂದ ನೋಡಿ ರಚಿಸಿದಾಗ ಮಾತ್ರ ಭರವಸೆಯ ಕಾವ್ಯ ಸೃಷ್ಟಿಯಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.</p>.<p>ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘ ಕೊಪ್ಪಳ, ಶ್ರೀರಾಮನಗರ ಆರುಷಿ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಬಸವರಾಜ ಗೌಡನಬಾವಿ ಅವರ ಚೊಚ್ಚಲ ಕವನ ಸಂಕಲನ ‘ಅಕ್ಷರಗಳ ಬಿಕ್ಕಳಿಕೆ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕನ್ನಡ ಕಾವ್ಯ ಪರಂಪರೆ ಸಮೃದ್ಧವಾದುದು. ಯುವ ಕವಿಗಳು ವಿಭಿನ್ನ ಸಂವೇದನೆಗಳು ಅಭಿವ್ಯಕ್ತಿಸುತ್ತಿದ್ದಾರೆ. ಬಸವರಾಜ ಗೌಡನಬಾವಿ ಅವರ ‘ಅಕ್ಷರಗಳ ಬಿಕ್ಕಳಿಕೆ’ ಸಂಕಲನ ವಿಭಿನ್ನ ಸಂವೇದನೆ, ವಿನ್ಯಾಸದಿಂದ ಗಮನಸೆಳೆಯುತ್ತದೆ. ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರನ್ನು ಪ್ರೊತ್ಸಾಹಿಸುವಲ್ಲಿ ಮುನ್ನೆಲೆಯಲ್ಲಿದೆ’ ಎಂದರು.</p>.<p>ಸಾಹಿತ್ಯ ಅಕಾಡೆಮಿ ಸದಸ್ಯ ಚನ್ನಬಸಪ್ಪ ಚಿಲ್ಕರಾಗಿ ಮಾತನಾಡಿ, ಬಸವರಾಜ ಗೌಡನಬಾವಿ ಅವರ ಕವಿತೆಗಳು ಗಾಢವಾದ ಸಾಮಾಜಿಕ ಪ್ರಜ್ಞೆ ಹೊಂದಿವೆ ಎಂದರು.</p>.<p>ಮುಮ್ತಾಜ್ ಬೇಗಂ, ಕವಿ ಬಸವರಾಜ ಗೌಡನಬಾವಿ ಮಾತ ನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ,ವಿಜಯಲಕ್ಷ್ಮಿ ನಾರಿನಾಳ, ತಾಲ್ಲೂಕು ಕಸಾಪ ಅಧ್ಯಕ್ಷ ರುದ್ರೇಶ ಆರ್ಹಾಳ, ಉಮಾ ದೇವಿ, ಗುಂಡೂರು ಪವನ ಕುಮಾರ, ರವಿ ಹಾದಿಮನಿ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260422-35-33355760</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>