<p>ಆಹಾರ ಭದ್ರತೆ ಎಂದರೆ ಕೇವಲ ಜನಸಂಖ್ಯೆಗೆ ತಕ್ಕಷ್ಟು ಆಹಾರ ಪೂರೈಕೆ ಮಾಡುವುದಲ್ಲ; ನಮ್ಮ ಸುತ್ತಲಿನ ವೈವಿಧ್ಯಮಯ ಆಹಾರ ಮೂಲಗಳನ್ನು ಸಮರ್ಪಕವಾಗಿ ಗುರುತಿಸಿ, ಬಳಸಿಕೊಳ್ಳುವುದೂ ಆಗಿದೆ. ಈ ಜೀವನ ಮಾದರಿಯನ್ನು ಮಳೆ ಹೇರಳವಾಗಿರುವ ಕರಾವಳಿ ಮತ್ತು ಮಲೆನಾಡಿನ ಜನರು ಸಹಜವಾಗಿ ಅಳವಡಿಸಿಕೊಂಡಿದ್ದರು. ಪ್ರಕೃತಿಯೇ ಅವರ ಆಹಾರ ಸಂಸ್ಕೃತಿಗೆ ಬೆನ್ನೆಲುಬಾಗಿತ್ತು.</p><p>ಆದರೆ ಆಧುನೀಕರಣದ ಅಬ್ಬರದಲ್ಲಿ ಈ ಭಾಗಗಳಲ್ಲಿಯೂ ಕೈತೋಟ, ಕಾಡುಸೊಪ್ಪು, ಸ್ಥಳೀಯ ಆಹಾರ ಪದ್ಧತಿ ಆಧಾರಿತ ಆಹಾರ ಭದ್ರತೆಯ ಕಲ್ಪನೆ ನಿಧಾನವಾಗಿ ಹಿಂದೆ ಸರಿಯುತ್ತಿದೆ. ಇಂಥ ಸಂದರ್ಭದಲ್ಲಿ ‘ಹಿತ್ತಲ ಸುತ್ತಲೂ’ ಕೃತಿ ಕೇವಲ ಒಂದು ಪುಸ್ತಕವಾಗಿಯೇ ಉಳಿಯದೆ, ಕೈತೋಟದ ಸಂಸ್ಕೃತಿಯನ್ನು ಪುನರುಜ್ಜೀವಗೊಳಿಸುವ ಕೈಪಿಡಿಯಂತೆ ನೆರವಾಗುತ್ತದೆ.</p><p>ಹಿತ್ತಲಲ್ಲಿ ನಾವು ಏನು ಬೆಳೆಸುತ್ತೇವೆ ಎಂಬುದಷ್ಟೇ ಮುಖ್ಯವಲ್ಲ; ತಾನಾಗಿಯೇ ಮೊಳೆತು ಬೆಳೆಯುವ ಅನೇಕ ಸಸ್ಯಗಳು, ಸೊಪ್ಪುಗಳಲ್ಲೂ ಅಪಾರ ಔಷಧೀಯ ಗುಣಗಳಿವೆ. ನಮ್ಮ ಪೂರ್ವಜರು ಅವನ್ನು ಅಡುಗೆಮನೆಯ ಪ್ರಯೋಗಗಳ ಮೂಲಕವೇ ಕಂಡುಹಿಡಿದಿದ್ದರು. ಆ ಪರಂಪರೆಯ ಜ್ಞಾನವನ್ನು ಈ ಕೃತಿ ಸರಳವಾಗಿ ದಾಖಲಿಸುತ್ತದೆ.</p><p>ಸಮೃದ್ಧ ಕೈತೋಟದಲ್ಲಿ ದೊರೆಯುವ ಸಾವಯವ ತರಕಾರಿಗಳು, ಹಣ್ಣುಗಳು, ಗೆಡ್ಡೆ–ಗೆಣಸುಗಳು, ವಿವಿಧ ಸೊಪ್ಪುಗಳ ಬಗ್ಗೆ ಇಲ್ಲಿರುವ ಮಾಹಿತಿ ಗಮನಾರ್ಹ. ಯಾವ ಪದಾರ್ಥದಲ್ಲಿ ಯಾವ ವಿಟಮಿನ್ ಇದೆ, ಅದನ್ನು ಅಡುಗೆಯಲ್ಲಿ ಹೇಗೆ ಬಳಸಬಹುದು ಎಂಬುದನ್ನು ಚಿತ್ರಸಹಿತವಾಗಿ ವಿವರಿಸಿದ್ದಾರೆ.</p><p>ಕೈತೋಟ ಮತ್ತು ಹೆಣ್ಣುಮಕ್ಕಳ ಸಂಬಂಧ ಹಿಂದಿನಿಂದಲೂ ಆಪ್ತ. ಒಂದು ಮನೆಯ ಹಿತ್ತಲನ್ನು ನೋಡಿದರೆ ಆ ಮನೆಯ ಬದುಕಿನ ಸೊಗಡು ಅರಿವಾಗುತ್ತದೆ. ವಿಶೇಷವಾಗಿ ಮಲೆನಾಡು ಮತ್ತು ಕರಾವಳಿಯ ಮಹಿಳೆಯರ ಬದುಕಿನಲ್ಲಿ ಕೈತೋಟ ಒಂದು ಸಹಜ ಸಂಸ್ಕೃತಿ. ಇಂಥ ಮಹಿಳೆಯರೇ ಸೇರಿ ಈ ವಿಶಿಷ್ಟ ಕೃತಿಯನ್ನು ಸಂಪಾದಿಸಿರುವುದು ಇನ್ನಷ್ಟು ಅರ್ಥಪೂರ್ಣವಾಗಿದೆ. ಸಾಂಪ್ರದಾಯಿಕ ಜ್ಞಾನವನ್ನು ಉಳಿಸಬೇಕು, ಅದನ್ನು ಮುಂದಿನ ಪೀಳಿಗೆಗೆ ಅಕ್ಷರ ರೂಪದಲ್ಲಿ ಹಸ್ತಾಂತರಿಸಬೇಕು ಎಂಬ ಆಶಯ ಈ ಕೃತಿಯ ಹಿಂದಿದೆ.</p>.<p>ಪ್ರಕಾಶನ: ವನಸ್ತ್ರೀ </p><p>ದರ ₹ 200</p><p>ಪುಟಗಳು 247</p><p>ಸಂಪರ್ಕ: 98868 56364</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಹಾರ ಭದ್ರತೆ ಎಂದರೆ ಕೇವಲ ಜನಸಂಖ್ಯೆಗೆ ತಕ್ಕಷ್ಟು ಆಹಾರ ಪೂರೈಕೆ ಮಾಡುವುದಲ್ಲ; ನಮ್ಮ ಸುತ್ತಲಿನ ವೈವಿಧ್ಯಮಯ ಆಹಾರ ಮೂಲಗಳನ್ನು ಸಮರ್ಪಕವಾಗಿ ಗುರುತಿಸಿ, ಬಳಸಿಕೊಳ್ಳುವುದೂ ಆಗಿದೆ. ಈ ಜೀವನ ಮಾದರಿಯನ್ನು ಮಳೆ ಹೇರಳವಾಗಿರುವ ಕರಾವಳಿ ಮತ್ತು ಮಲೆನಾಡಿನ ಜನರು ಸಹಜವಾಗಿ ಅಳವಡಿಸಿಕೊಂಡಿದ್ದರು. ಪ್ರಕೃತಿಯೇ ಅವರ ಆಹಾರ ಸಂಸ್ಕೃತಿಗೆ ಬೆನ್ನೆಲುಬಾಗಿತ್ತು.</p><p>ಆದರೆ ಆಧುನೀಕರಣದ ಅಬ್ಬರದಲ್ಲಿ ಈ ಭಾಗಗಳಲ್ಲಿಯೂ ಕೈತೋಟ, ಕಾಡುಸೊಪ್ಪು, ಸ್ಥಳೀಯ ಆಹಾರ ಪದ್ಧತಿ ಆಧಾರಿತ ಆಹಾರ ಭದ್ರತೆಯ ಕಲ್ಪನೆ ನಿಧಾನವಾಗಿ ಹಿಂದೆ ಸರಿಯುತ್ತಿದೆ. ಇಂಥ ಸಂದರ್ಭದಲ್ಲಿ ‘ಹಿತ್ತಲ ಸುತ್ತಲೂ’ ಕೃತಿ ಕೇವಲ ಒಂದು ಪುಸ್ತಕವಾಗಿಯೇ ಉಳಿಯದೆ, ಕೈತೋಟದ ಸಂಸ್ಕೃತಿಯನ್ನು ಪುನರುಜ್ಜೀವಗೊಳಿಸುವ ಕೈಪಿಡಿಯಂತೆ ನೆರವಾಗುತ್ತದೆ.</p><p>ಹಿತ್ತಲಲ್ಲಿ ನಾವು ಏನು ಬೆಳೆಸುತ್ತೇವೆ ಎಂಬುದಷ್ಟೇ ಮುಖ್ಯವಲ್ಲ; ತಾನಾಗಿಯೇ ಮೊಳೆತು ಬೆಳೆಯುವ ಅನೇಕ ಸಸ್ಯಗಳು, ಸೊಪ್ಪುಗಳಲ್ಲೂ ಅಪಾರ ಔಷಧೀಯ ಗುಣಗಳಿವೆ. ನಮ್ಮ ಪೂರ್ವಜರು ಅವನ್ನು ಅಡುಗೆಮನೆಯ ಪ್ರಯೋಗಗಳ ಮೂಲಕವೇ ಕಂಡುಹಿಡಿದಿದ್ದರು. ಆ ಪರಂಪರೆಯ ಜ್ಞಾನವನ್ನು ಈ ಕೃತಿ ಸರಳವಾಗಿ ದಾಖಲಿಸುತ್ತದೆ.</p><p>ಸಮೃದ್ಧ ಕೈತೋಟದಲ್ಲಿ ದೊರೆಯುವ ಸಾವಯವ ತರಕಾರಿಗಳು, ಹಣ್ಣುಗಳು, ಗೆಡ್ಡೆ–ಗೆಣಸುಗಳು, ವಿವಿಧ ಸೊಪ್ಪುಗಳ ಬಗ್ಗೆ ಇಲ್ಲಿರುವ ಮಾಹಿತಿ ಗಮನಾರ್ಹ. ಯಾವ ಪದಾರ್ಥದಲ್ಲಿ ಯಾವ ವಿಟಮಿನ್ ಇದೆ, ಅದನ್ನು ಅಡುಗೆಯಲ್ಲಿ ಹೇಗೆ ಬಳಸಬಹುದು ಎಂಬುದನ್ನು ಚಿತ್ರಸಹಿತವಾಗಿ ವಿವರಿಸಿದ್ದಾರೆ.</p><p>ಕೈತೋಟ ಮತ್ತು ಹೆಣ್ಣುಮಕ್ಕಳ ಸಂಬಂಧ ಹಿಂದಿನಿಂದಲೂ ಆಪ್ತ. ಒಂದು ಮನೆಯ ಹಿತ್ತಲನ್ನು ನೋಡಿದರೆ ಆ ಮನೆಯ ಬದುಕಿನ ಸೊಗಡು ಅರಿವಾಗುತ್ತದೆ. ವಿಶೇಷವಾಗಿ ಮಲೆನಾಡು ಮತ್ತು ಕರಾವಳಿಯ ಮಹಿಳೆಯರ ಬದುಕಿನಲ್ಲಿ ಕೈತೋಟ ಒಂದು ಸಹಜ ಸಂಸ್ಕೃತಿ. ಇಂಥ ಮಹಿಳೆಯರೇ ಸೇರಿ ಈ ವಿಶಿಷ್ಟ ಕೃತಿಯನ್ನು ಸಂಪಾದಿಸಿರುವುದು ಇನ್ನಷ್ಟು ಅರ್ಥಪೂರ್ಣವಾಗಿದೆ. ಸಾಂಪ್ರದಾಯಿಕ ಜ್ಞಾನವನ್ನು ಉಳಿಸಬೇಕು, ಅದನ್ನು ಮುಂದಿನ ಪೀಳಿಗೆಗೆ ಅಕ್ಷರ ರೂಪದಲ್ಲಿ ಹಸ್ತಾಂತರಿಸಬೇಕು ಎಂಬ ಆಶಯ ಈ ಕೃತಿಯ ಹಿಂದಿದೆ.</p>.<p>ಪ್ರಕಾಶನ: ವನಸ್ತ್ರೀ </p><p>ದರ ₹ 200</p><p>ಪುಟಗಳು 247</p><p>ಸಂಪರ್ಕ: 98868 56364</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>