<p><strong>ಹೊಸಪೇಟೆ: ‘</strong>ಬೆಂಕಿಯ ಮಳೆ’ ಕೃತಿಯಲ್ಲಿರುವ ಹಾಡುಗಳು ಕೇವಲ ಗೀತೆಗಳಲ್ಲ, ದಮನಿತ ವರ್ಗದ ಅಸ್ತಿತ್ವದ ಕೂಗು ಮತ್ತು ಬದುಕಿನ ಮಾರ್ಗವನ್ನು ಸೂಚಿಸುವ ಅಭಿವೃಕ್ತಿಗಳಾಗಿವೆ ಎಂದು ಕವಿ ಹಾಗೂ ಸಂಸ್ಕೃತಿ ಚಿಂತಕ ಆರಿಫ್ ರಾಜಾ ಹೇಳಿದರು.</p>.<p>ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ವತಿಯಿಂದ ನಡೆದ ‘ನಮ್ಮ ಮಾತು–37’ ಕಾರ್ಯಕ್ರಮದ ಅಂಗವಾಗಿ ‘ಬೆಂಕಿಯ ಮಳೆ’ – ಸಮಗ್ರ ಹೋರಾಟದ ಹಾಡುಗಳು ಕೃತಿಯ ಕುರಿತು ಸಂವಾದದಲ್ಲಿ ಅವರು ಮಾತನಾಡಿದರು.</p>.<p>‘ಕವಿಗಿಂತ ಹಾಡುಗಾರ ಹೆಚ್ಚು ಪ್ರಾಮುಖ್ಯನಾಗುತ್ತಾನೆ ಕಾರಣ, ಕೃತಿಯ ಸಂದೇಶವನ್ನು ಜನತೆಗೆ ತಲುಪಿಸುವ ಜವಾಬ್ದಾರಿ ಹಾಡುಗಾರನ ಮೇಲಿರುತ್ತದೆ’ ಎಂದರು.</p>.<p>ಕೃತಿಯ ಸಂಪಾದಕ ಹಾಗೂ ಕನ್ನಡ ವಿಶ್ವವಿದ್ಯಾಲಯ ಕುಪ್ಪಳ್ಳಿ ಕೇಂದ್ರದ ಹಿರಿಯ ಪ್ರಾಧ್ಯಾಪಕ ಪ್ರೊ.ಬಿ.ಎಂ.ಪುಟ್ಟಯ್ಯ ಮಾತನಾಡಿ, ‘ಬೆಂಕಿಯ ಮಳೆ’ ಎಂಬ ಶೀರ್ಷಿಕೆಯನ್ನು ಸಿದ್ದಲಿಂಗಯ್ಯ ಅವರ ಕಾವ್ಯದಿಂದ ಪಡೆದಿರುವುದಾಗಿ ತಿಳಿಸಿದರು. ಬೆಂಕಿಯು ನಾಶವನ್ನು ಸೂಚಿಸಿದರೆ ಮಳೆಯು ಸೃಷ್ಟಿಯನ್ನು ಸೂಚಿಸುತ್ತದೆ. ಈ ಎರಡರ ಸಂಯೋಜನೆಯ ಮೂಲಕ ಶೀರ್ಷಿಕೆ ಹೋರಾಟದ ಸ್ವಭಾವವನ್ನು ವ್ಯಕ್ತಪಡಿಸುತ್ತದೆ ಎಂದರು.</p>.<p>ಇತ್ತೀಚಿನ ದಿನಗಳಲ್ಲಿ ಹೋರಾಟದ ಗೀತೆಗಳು ಸುಗಮ ಸಂಗೀತದ ರೂಪ ಪಡೆದುಕೊಳ್ಳುತ್ತಿರುವುದು ವಿಷಾದನೀಯ ಸಂಗತಿ ಎಂದ ಅವರು, ಈ ಹಾಡುಗಳು ಕೇರಿಯಿಂದ ನಾಡಿನವರೆಗೆ, ಅಲ್ಲಿಂದ ರಾಷ್ಟ್ರಮಟ್ಟದವರೆಗೆ ವ್ಯಾಪಿಸಬೇಕಾಗಿದೆ ಎಂದರು.</p>.<p>ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟಗಿರಿ ದಳವಾಯಿ ವಹಿಸಿದ್ದರು. ಎಲ್ಲಿಯವರೆಗೆ ಸಮಾಜದಲ್ಲಿ ಅಸಮಾನತೆ ಇರುತ್ತದೋ ಅಲ್ಲಿಯವರೆಗೂ ಹೋರಾಟದ ಹಾಡುಗಳು ಮತ್ತೆ ಮತ್ತೆ ಅಸ್ತಿತ್ವ ಪಡೆಯುತ್ತಲೇ ಇರುತ್ತವೆ ಎಂದರು.</p>.<p>ಸಂಶೋಧನಾರ್ಥಿ ಪ್ರವೀಣ ಕಿತ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ನಾಯಕ್, ಕಮಲಮ್ಮ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-25-1926841019</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ: ‘</strong>ಬೆಂಕಿಯ ಮಳೆ’ ಕೃತಿಯಲ್ಲಿರುವ ಹಾಡುಗಳು ಕೇವಲ ಗೀತೆಗಳಲ್ಲ, ದಮನಿತ ವರ್ಗದ ಅಸ್ತಿತ್ವದ ಕೂಗು ಮತ್ತು ಬದುಕಿನ ಮಾರ್ಗವನ್ನು ಸೂಚಿಸುವ ಅಭಿವೃಕ್ತಿಗಳಾಗಿವೆ ಎಂದು ಕವಿ ಹಾಗೂ ಸಂಸ್ಕೃತಿ ಚಿಂತಕ ಆರಿಫ್ ರಾಜಾ ಹೇಳಿದರು.</p>.<p>ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ವತಿಯಿಂದ ನಡೆದ ‘ನಮ್ಮ ಮಾತು–37’ ಕಾರ್ಯಕ್ರಮದ ಅಂಗವಾಗಿ ‘ಬೆಂಕಿಯ ಮಳೆ’ – ಸಮಗ್ರ ಹೋರಾಟದ ಹಾಡುಗಳು ಕೃತಿಯ ಕುರಿತು ಸಂವಾದದಲ್ಲಿ ಅವರು ಮಾತನಾಡಿದರು.</p>.<p>‘ಕವಿಗಿಂತ ಹಾಡುಗಾರ ಹೆಚ್ಚು ಪ್ರಾಮುಖ್ಯನಾಗುತ್ತಾನೆ ಕಾರಣ, ಕೃತಿಯ ಸಂದೇಶವನ್ನು ಜನತೆಗೆ ತಲುಪಿಸುವ ಜವಾಬ್ದಾರಿ ಹಾಡುಗಾರನ ಮೇಲಿರುತ್ತದೆ’ ಎಂದರು.</p>.<p>ಕೃತಿಯ ಸಂಪಾದಕ ಹಾಗೂ ಕನ್ನಡ ವಿಶ್ವವಿದ್ಯಾಲಯ ಕುಪ್ಪಳ್ಳಿ ಕೇಂದ್ರದ ಹಿರಿಯ ಪ್ರಾಧ್ಯಾಪಕ ಪ್ರೊ.ಬಿ.ಎಂ.ಪುಟ್ಟಯ್ಯ ಮಾತನಾಡಿ, ‘ಬೆಂಕಿಯ ಮಳೆ’ ಎಂಬ ಶೀರ್ಷಿಕೆಯನ್ನು ಸಿದ್ದಲಿಂಗಯ್ಯ ಅವರ ಕಾವ್ಯದಿಂದ ಪಡೆದಿರುವುದಾಗಿ ತಿಳಿಸಿದರು. ಬೆಂಕಿಯು ನಾಶವನ್ನು ಸೂಚಿಸಿದರೆ ಮಳೆಯು ಸೃಷ್ಟಿಯನ್ನು ಸೂಚಿಸುತ್ತದೆ. ಈ ಎರಡರ ಸಂಯೋಜನೆಯ ಮೂಲಕ ಶೀರ್ಷಿಕೆ ಹೋರಾಟದ ಸ್ವಭಾವವನ್ನು ವ್ಯಕ್ತಪಡಿಸುತ್ತದೆ ಎಂದರು.</p>.<p>ಇತ್ತೀಚಿನ ದಿನಗಳಲ್ಲಿ ಹೋರಾಟದ ಗೀತೆಗಳು ಸುಗಮ ಸಂಗೀತದ ರೂಪ ಪಡೆದುಕೊಳ್ಳುತ್ತಿರುವುದು ವಿಷಾದನೀಯ ಸಂಗತಿ ಎಂದ ಅವರು, ಈ ಹಾಡುಗಳು ಕೇರಿಯಿಂದ ನಾಡಿನವರೆಗೆ, ಅಲ್ಲಿಂದ ರಾಷ್ಟ್ರಮಟ್ಟದವರೆಗೆ ವ್ಯಾಪಿಸಬೇಕಾಗಿದೆ ಎಂದರು.</p>.<p>ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟಗಿರಿ ದಳವಾಯಿ ವಹಿಸಿದ್ದರು. ಎಲ್ಲಿಯವರೆಗೆ ಸಮಾಜದಲ್ಲಿ ಅಸಮಾನತೆ ಇರುತ್ತದೋ ಅಲ್ಲಿಯವರೆಗೂ ಹೋರಾಟದ ಹಾಡುಗಳು ಮತ್ತೆ ಮತ್ತೆ ಅಸ್ತಿತ್ವ ಪಡೆಯುತ್ತಲೇ ಇರುತ್ತವೆ ಎಂದರು.</p>.<p>ಸಂಶೋಧನಾರ್ಥಿ ಪ್ರವೀಣ ಕಿತ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ನಾಯಕ್, ಕಮಲಮ್ಮ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-25-1926841019</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>