ಮಂಗಳೂರು ಸಮಾಚಾರದ ಪ್ರವರ್ತಕ ಹರ್ಮನ್ ಮೊಗ್ಲಿಂಗ್ ಅವರಿಂದ ಪ್ರಾರಂಭಿಸಿ ಬಿ.ಗಣಪತಿವರೆಗೆ 55 ಪತ್ರಕರ್ತರ ಕುರಿತಾದ ವಿವರ, ಸಾಧನೆಯ ಪರಿಚಯ ಈ ಕೃತಿಯಲ್ಲಿ ಸಿಗುತ್ತದೆ. ಭಾಷ್ಯಂ ಭಾಷ್ಯಾಚಾರ್ಯ, ಡಿ.ಜಿ.ಗುಂಡಪ್ಪ, ಸೀತಾರಾಮಶಾಸ್ತ್ರಿಗಳು, ಸಿದ್ದವನಹಳ್ಳಿ ಕೃಷ್ಣಶರ್ಮರಿಂದ ರಾಜಶೇಖರ್ ಕೋಟಿ, ನಾಗೇಶ್ ಹೆಗಡೆಯವರಂತಹ ಪತ್ರಕರ್ತರ ಮಾಹಿತಿ, ಸಾಧನೆಗಳ ಕಿರುಪರಿಚಯ ಇಲ್ಲಿದೆ.