<p>ಮೈಸೂರು: ‘ಮಾತಿಲ್ಲ ಗುರುತು ಇದೆ ಕವನಸಂಕಲನವು ಬದುಕಿನಲ್ಲಿ ಕಂಡದನ್ನು ಪದಗಳ ಮೂಲಕ ಹಿಡಿದಿಟ್ಟ ಕೃತಿ’ ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.</p>.<p>ಇಲ್ಲಿನ ರಂಗಾಯಣದ ವನರಂಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕನ್ನಡ ಓದುಗರ ಒಕ್ಕೂಟ, ಸಂಸ್ಕೃತಿ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಬುಧವಾರ ಎಂ.ಬಿ.ಪ್ರವೀಣ್ ಅವರ ‘ಮಾತಿಲ್ಲ ಗುರುತು ಇದೆ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.</p>.<p>‘ಕಡಿಮೆ ಪದಗಳಲ್ಲಿಯೇ ಹೇಳಬಯಸುವ ವಿಷಯನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಅರ್ಥೈಸಿಕೊಳ್ಳುವವವರು ಕವಿಯ ಭಾವದೊಳಗೆ ಬೆರೆತುಹೊಗಬೇಕು. ಇಲ್ಲಿನ ಕವಿತೆಗಳು ಅಮೂರ್ತ ಚಿತ್ರಕಲೆಯಂತಿದೆ, ಅಸ್ಪಷ್ಟ ಚಿತ್ರಗಳ ಸರಣಿಯನ್ನೇ ಕಾಣಿಸುತ್ತವೆ’ ಎಂದರು.</p>.<p>‘ಕಾವ್ಯದಲ್ಲಿ ಸ್ಪಷ್ಟತೆ ಎನ್ನುವುದೂ ಒಂದು ಭ್ರಮೆಯೆ? ಅಥವಾ ಅಮೂರ್ತತೆಯಲ್ಲೇ ಸ್ಪಷ್ಟತೆಯ ತುಣುಕುಗಳಿವೆಯೆ? ಅಥವಾ ಎಲ್ಲರ ಅನುಭವಗಳೂ ಬಹುತೇಕ ಬಾರಿ ಅಮೂರ್ತವಾಗಿಯೇ ಇರುತ್ತವೆಯೆ? ಹೀಗೆ ಹತ್ತು ಹಲವು ಚಿಂತನೆಗೆ ಹಚ್ಚಬಲ್ಲ ಕಾವ್ಯಕೃತಿ ಇದು’ ಎಂದರು.</p>.<p>ಕೆಎಸ್ಒಯು ಸಹ ಪ್ರಾಧ್ಯಾಪಕ ಪಿ.ಮಣಿ, ‘ಮನುಷ್ಯನ ಒಳ ಮನಸ್ಸಿನ ಮೌನವನ್ನು ಸೂಕ್ಷ್ಮವಾಗಿ ಚಿತ್ರಿಸುವ, ಸಮಾಜದ ವಸ್ತುಸ್ಥಿತಿಗಳನ್ನು ತೋರುವ ಸಂಕಲನ ಇದು’ ಎಂದರು.</p>.<p>ವಿಶ್ರಾಂತ ಕನ್ನಡ ಪ್ರಾಧ್ಯಾಪಕ ರಾಮೇಗೌಡ(ರಾಗೌ), ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ಬುಕ್ ಕ್ಲಬ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-39-269170443</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಮಾತಿಲ್ಲ ಗುರುತು ಇದೆ ಕವನಸಂಕಲನವು ಬದುಕಿನಲ್ಲಿ ಕಂಡದನ್ನು ಪದಗಳ ಮೂಲಕ ಹಿಡಿದಿಟ್ಟ ಕೃತಿ’ ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.</p>.<p>ಇಲ್ಲಿನ ರಂಗಾಯಣದ ವನರಂಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕನ್ನಡ ಓದುಗರ ಒಕ್ಕೂಟ, ಸಂಸ್ಕೃತಿ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಬುಧವಾರ ಎಂ.ಬಿ.ಪ್ರವೀಣ್ ಅವರ ‘ಮಾತಿಲ್ಲ ಗುರುತು ಇದೆ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.</p>.<p>‘ಕಡಿಮೆ ಪದಗಳಲ್ಲಿಯೇ ಹೇಳಬಯಸುವ ವಿಷಯನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಅರ್ಥೈಸಿಕೊಳ್ಳುವವವರು ಕವಿಯ ಭಾವದೊಳಗೆ ಬೆರೆತುಹೊಗಬೇಕು. ಇಲ್ಲಿನ ಕವಿತೆಗಳು ಅಮೂರ್ತ ಚಿತ್ರಕಲೆಯಂತಿದೆ, ಅಸ್ಪಷ್ಟ ಚಿತ್ರಗಳ ಸರಣಿಯನ್ನೇ ಕಾಣಿಸುತ್ತವೆ’ ಎಂದರು.</p>.<p>‘ಕಾವ್ಯದಲ್ಲಿ ಸ್ಪಷ್ಟತೆ ಎನ್ನುವುದೂ ಒಂದು ಭ್ರಮೆಯೆ? ಅಥವಾ ಅಮೂರ್ತತೆಯಲ್ಲೇ ಸ್ಪಷ್ಟತೆಯ ತುಣುಕುಗಳಿವೆಯೆ? ಅಥವಾ ಎಲ್ಲರ ಅನುಭವಗಳೂ ಬಹುತೇಕ ಬಾರಿ ಅಮೂರ್ತವಾಗಿಯೇ ಇರುತ್ತವೆಯೆ? ಹೀಗೆ ಹತ್ತು ಹಲವು ಚಿಂತನೆಗೆ ಹಚ್ಚಬಲ್ಲ ಕಾವ್ಯಕೃತಿ ಇದು’ ಎಂದರು.</p>.<p>ಕೆಎಸ್ಒಯು ಸಹ ಪ್ರಾಧ್ಯಾಪಕ ಪಿ.ಮಣಿ, ‘ಮನುಷ್ಯನ ಒಳ ಮನಸ್ಸಿನ ಮೌನವನ್ನು ಸೂಕ್ಷ್ಮವಾಗಿ ಚಿತ್ರಿಸುವ, ಸಮಾಜದ ವಸ್ತುಸ್ಥಿತಿಗಳನ್ನು ತೋರುವ ಸಂಕಲನ ಇದು’ ಎಂದರು.</p>.<p>ವಿಶ್ರಾಂತ ಕನ್ನಡ ಪ್ರಾಧ್ಯಾಪಕ ರಾಮೇಗೌಡ(ರಾಗೌ), ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ಬುಕ್ ಕ್ಲಬ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-39-269170443</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>