<p>ಬೆಂಗಳೂರು: ‘ಜನರನ್ನು ಖುಷಿಯಾಗಿ ಇಡಬಲ್ಲ ಕಲಾವಿದರು ದೇಶದ ಸಾಂಸ್ಕೃತಿಕ ರಾಯಭಾರಿಗಳು’ ಎಂದು ಮಾಜಿ ಸಚಿವೆ ರಾಣಿ ಸತೀಶ್ ಹೇಳಿದರು.</p>.<p>ಸೃಷ್ಟಿ ಸಂಸ್ಥೆ ಹಾಗೂ ರೋಟರಿ ಡಿಸ್ಟ್ರಿಕ್ಟ್ 3191 ಭಾನುವಾರ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ನೃತ್ಯ ದಿನಾಚರಣೆಯಲ್ಲಿ ಸೃಷ್ಟಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.</p>.<p>‘ಸಂಸ್ಕೃತಿ ಎನ್ನುವುದು ಯಾವುದೇ ದೇಶದ ಹಿರಿಮೆ. ಕಲೆ ಎಲ್ಲಿ ಎತ್ತರದ ಸ್ಥಾನದಲ್ಲಿ ಇರುತ್ತದೆಯೋ ಅಲ್ಲಿ ಕಲಾವಿದರು ಗೌರವ ಪಡೆಯುತ್ತಾರೆ. ಅಂತಹ ದೇಶವು ಉನ್ನತವಾಗಿ ಬೆಳೆಯುತ್ತದೆ. ಕಲಾವಿದರನ್ನು ಪ್ರೋತ್ಸಾಹಿಸೋಣ’ ಎಂದು ಹೇಳಿದರು.</p>.<p>ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ‘ಕಲಾವಿದರಿಗೆ ಹೆಚ್ಚು ಸನ್ಮಾನಗಳು ಆಗಬೇಕು. ಅವರನ್ನು ಗೌರವಿಸುವುದು ಕಲೆಯನ್ನು ಗೌರವಿಸಿದಂತಾಗಲಿದೆ. ಕರ್ನಾಟಕ ದಲ್ಲೂ ಒಳ್ಳೆಯ ಕಲಾವಿದರನ್ನು ಗೌರವಿಸುವ ಪರಂಪರೆ ಗಟ್ಟಿಯಾಗಿದೆ’ ಎಂದು ನುಡಿದರು.</p>.<p>ರಂಗ ಸಂಘಟಕ ಶ್ರೀನಿವಾಸ ಕಪ್ಪಣ್ಣ ಮಾತನಾಡಿ, ‘ಪ್ರತಿಭಾ ಪ್ರಹ್ಲಾದ್ ಹಾಗೂ ಬಿ.ಜಯಶ್ರೀ ಅವರು ತಮ್ಮ ಕಲೆಯ ಮೂಲಕ ಕರ್ನಾಟಕದ ಹಿರಿಮೆಯನ್ನು ವಿಶ್ವ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕಲೆಯೊಂದಿಗೆ ನಂಟು ಇಟ್ಟುಕೊಂಡು ಈಗಲೂ ಸಕ್ರಿಯರಾಗಿದ್ದಾರೆ’ ಎಂದುಹೇಳಿದರು.</p>.<p>ಪ್ರಶಸ್ತಿ ಸ್ವೀಕರಿಸಿದ ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್, ‘ಕಲಾವಿದರು ಜನಿಸಿರುವುದೇ ಜನರನ್ನು ಖುಷಿಯಾಗಿ ಇಡಲು. ಜನ ಕಲೆಯನ್ನು ಖುಷಿಪಟ್ಟಾಗ ಕಲಾವಿದರ ಆ ಕ್ಷಣವನ್ನು ವರ್ಣಿಸಲು ಆಗದು. ಅಂತಹ ಅಪಾರ ಪ್ರೀತಿಯನ್ನು ಜನ ನಮಗೆ ಕೊಟ್ಟಿದ್ದಾರೆ. ಜೀವ ಇರುವ ಕೊನೆ ಕ್ಷಣದವರೆಗೂ ಕಲೆಯನ್ನು ಪಸರಿಸುವ ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು.</p>.<p>ರಂಗ ಕಲಾವಿದೆ ಬಿ.ಜಯಶ್ರೀ ಹಾಗೂ ನೃತ್ಯ ಪಟು ಪ್ರತಿಭಾ ಪ್ರಹ್ಲಾದ್ ಅವರು ಸೃಷ್ಟಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದರು. ಪ್ರತಿಭಾ ಪ್ರಹ್ಲಾದ್ ಅವರು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರೆ, ಬಿ.ಜಯಶ್ರೀ ಹಾಗೂ ತಂಡದವರು ’ಕರಿಮಾಯಿ’ ನಾಟಕ ಪ್ರದರ್ಶಿಸಿದರು.</p>.<p>ಸೃಷ್ಟಿ ಸಂಸ್ಥೆಯ ಎ.ವಿ.ಸತ್ಯನಾರಾಯಣ, ರೋಟರಿ ಅಧ್ಯಕ್ಷ ರವೀಂದ್ರ ಉಪಸ್ಥಿತರಿದ್ದರು. ವಿವಿಧ ತಂಡಗಳಿಂದ ನೃತ್ಯ ಕಾರ್ಯಕ್ರಮಗಳು ನಡೆದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-4-11881434</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಜನರನ್ನು ಖುಷಿಯಾಗಿ ಇಡಬಲ್ಲ ಕಲಾವಿದರು ದೇಶದ ಸಾಂಸ್ಕೃತಿಕ ರಾಯಭಾರಿಗಳು’ ಎಂದು ಮಾಜಿ ಸಚಿವೆ ರಾಣಿ ಸತೀಶ್ ಹೇಳಿದರು.</p>.<p>ಸೃಷ್ಟಿ ಸಂಸ್ಥೆ ಹಾಗೂ ರೋಟರಿ ಡಿಸ್ಟ್ರಿಕ್ಟ್ 3191 ಭಾನುವಾರ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ನೃತ್ಯ ದಿನಾಚರಣೆಯಲ್ಲಿ ಸೃಷ್ಟಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.</p>.<p>‘ಸಂಸ್ಕೃತಿ ಎನ್ನುವುದು ಯಾವುದೇ ದೇಶದ ಹಿರಿಮೆ. ಕಲೆ ಎಲ್ಲಿ ಎತ್ತರದ ಸ್ಥಾನದಲ್ಲಿ ಇರುತ್ತದೆಯೋ ಅಲ್ಲಿ ಕಲಾವಿದರು ಗೌರವ ಪಡೆಯುತ್ತಾರೆ. ಅಂತಹ ದೇಶವು ಉನ್ನತವಾಗಿ ಬೆಳೆಯುತ್ತದೆ. ಕಲಾವಿದರನ್ನು ಪ್ರೋತ್ಸಾಹಿಸೋಣ’ ಎಂದು ಹೇಳಿದರು.</p>.<p>ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ‘ಕಲಾವಿದರಿಗೆ ಹೆಚ್ಚು ಸನ್ಮಾನಗಳು ಆಗಬೇಕು. ಅವರನ್ನು ಗೌರವಿಸುವುದು ಕಲೆಯನ್ನು ಗೌರವಿಸಿದಂತಾಗಲಿದೆ. ಕರ್ನಾಟಕ ದಲ್ಲೂ ಒಳ್ಳೆಯ ಕಲಾವಿದರನ್ನು ಗೌರವಿಸುವ ಪರಂಪರೆ ಗಟ್ಟಿಯಾಗಿದೆ’ ಎಂದು ನುಡಿದರು.</p>.<p>ರಂಗ ಸಂಘಟಕ ಶ್ರೀನಿವಾಸ ಕಪ್ಪಣ್ಣ ಮಾತನಾಡಿ, ‘ಪ್ರತಿಭಾ ಪ್ರಹ್ಲಾದ್ ಹಾಗೂ ಬಿ.ಜಯಶ್ರೀ ಅವರು ತಮ್ಮ ಕಲೆಯ ಮೂಲಕ ಕರ್ನಾಟಕದ ಹಿರಿಮೆಯನ್ನು ವಿಶ್ವ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕಲೆಯೊಂದಿಗೆ ನಂಟು ಇಟ್ಟುಕೊಂಡು ಈಗಲೂ ಸಕ್ರಿಯರಾಗಿದ್ದಾರೆ’ ಎಂದುಹೇಳಿದರು.</p>.<p>ಪ್ರಶಸ್ತಿ ಸ್ವೀಕರಿಸಿದ ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್, ‘ಕಲಾವಿದರು ಜನಿಸಿರುವುದೇ ಜನರನ್ನು ಖುಷಿಯಾಗಿ ಇಡಲು. ಜನ ಕಲೆಯನ್ನು ಖುಷಿಪಟ್ಟಾಗ ಕಲಾವಿದರ ಆ ಕ್ಷಣವನ್ನು ವರ್ಣಿಸಲು ಆಗದು. ಅಂತಹ ಅಪಾರ ಪ್ರೀತಿಯನ್ನು ಜನ ನಮಗೆ ಕೊಟ್ಟಿದ್ದಾರೆ. ಜೀವ ಇರುವ ಕೊನೆ ಕ್ಷಣದವರೆಗೂ ಕಲೆಯನ್ನು ಪಸರಿಸುವ ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು.</p>.<p>ರಂಗ ಕಲಾವಿದೆ ಬಿ.ಜಯಶ್ರೀ ಹಾಗೂ ನೃತ್ಯ ಪಟು ಪ್ರತಿಭಾ ಪ್ರಹ್ಲಾದ್ ಅವರು ಸೃಷ್ಟಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದರು. ಪ್ರತಿಭಾ ಪ್ರಹ್ಲಾದ್ ಅವರು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರೆ, ಬಿ.ಜಯಶ್ರೀ ಹಾಗೂ ತಂಡದವರು ’ಕರಿಮಾಯಿ’ ನಾಟಕ ಪ್ರದರ್ಶಿಸಿದರು.</p>.<p>ಸೃಷ್ಟಿ ಸಂಸ್ಥೆಯ ಎ.ವಿ.ಸತ್ಯನಾರಾಯಣ, ರೋಟರಿ ಅಧ್ಯಕ್ಷ ರವೀಂದ್ರ ಉಪಸ್ಥಿತರಿದ್ದರು. ವಿವಿಧ ತಂಡಗಳಿಂದ ನೃತ್ಯ ಕಾರ್ಯಕ್ರಮಗಳು ನಡೆದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-4-11881434</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>