<p>ಕಾಸರಗೋಡು: ಇಲ್ಲಿನ ಪೆರಿಯ ಬೇಕಲ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ‘ವೈಶಾಖ ನಟನಂ’ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ದಕ್ಷಿಣ ಅಮೆರಿಕಾದ ಪೆರು ದೇಶದ ಕಲಾವಿದೆ ಅನಂಗ ಮಂಜರಿ ಗೊನ್ಸಾಲ್ವಸ್ ಭರತನಾಟ್ಯ ಪ್ರದರ್ಶಿಸಿ ಗಮನ ಸೆಳೆದರು.</p>.<p>ಅವರು ನಂದಿ ಮಂಟಪದಲ್ಲಿ ಭಾನುವಾರ ನಡೆದ ಪ್ರಸ್ತುತಿಯಲ್ಲಿ ಗೊನ್ಸಾಲ್ವಸ್ನಂಗ ಅವರ ಅಭಿನಯ ಮತ್ತು ತಾಳ–ಲಯ–ಬದ್ಧ ನರ್ತನ ಕಲಾಭಿಮಾನಿಗಳ ಮನಸೂರೆಗೊಂಡಿತು.</p>.<p>ಜಾನಕಿ ರಂಗರಾಜ್ ಅವರ ಶಿಷ್ಯೆಯಾಗಿರುವ ಅನಂಗ ಮುಂದಿನ ಬಾರಿಯೂ ಕಾಸರಗೋಡಿಗೆ ಬರುವ ಆಶಯದೊಂದಿಗೆ ನೃತ್ಯ ನಮನ ಸಲ್ಲಿಸಿದರು.</p>.<p>ಹಾಂಗ್ಕಾಂಗ್ನಿಂದ ಬಂದಿದ್ದ ಸಂಜಯ್ ವಡಪಳ್ಳಿ ಅವರ ನೃತ್ಯ ಪ್ರದರ್ಶನವೂ ನಂದಿ ಮಂಟಪದಲ್ಲಿ ರೋಮಾಂಚನ ಸೃಷ್ಟಿಸಿತು. ಮುಳಿಯ ಕುಟುಂಬದ ಆದ್ಯಾ ಸುಲೋಚನ, ಶಾರ್ವರಿ ಮಯ್ಯ ಹಾಗೂ ಮೈಸೂರಿನ ಕೆ.ಕುಮಾರ್ ಅವರಿಂದಲೂ ನೃತ್ಯ ವೈವಿಧ್ಯ ಪ್ರಸ್ತುತಗೊಂಡಿತು.</p>.<p>ನಂದಿಮಂಟಪ ಮತ್ತು ಧೇನು ಮಂಟಪದಲ್ಲಿ ಭರತನಾಟ್ಯ, ಮೋಹಿನಿಯಾಟ್ಟಂ, ಕೂಚಿಪುಡಿ, ಕೇರಳ ನಟನಂ, ಕಥಕ್ ಹಾಗೂ ತಿರುವಾದಿರಕ್ಕಳಿ ಮೊದಲಾದ ಶಾಸ್ತ್ರೀಯ ಮತ್ತು ಸಾಂಪ್ರದಾಯಿಕ ನೃತ್ಯ ಪ್ರಕಾರಗಳು ಮುದ ನೀಡಿದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-29-1790194358</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾಸರಗೋಡು: ಇಲ್ಲಿನ ಪೆರಿಯ ಬೇಕಲ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ‘ವೈಶಾಖ ನಟನಂ’ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ದಕ್ಷಿಣ ಅಮೆರಿಕಾದ ಪೆರು ದೇಶದ ಕಲಾವಿದೆ ಅನಂಗ ಮಂಜರಿ ಗೊನ್ಸಾಲ್ವಸ್ ಭರತನಾಟ್ಯ ಪ್ರದರ್ಶಿಸಿ ಗಮನ ಸೆಳೆದರು.</p>.<p>ಅವರು ನಂದಿ ಮಂಟಪದಲ್ಲಿ ಭಾನುವಾರ ನಡೆದ ಪ್ರಸ್ತುತಿಯಲ್ಲಿ ಗೊನ್ಸಾಲ್ವಸ್ನಂಗ ಅವರ ಅಭಿನಯ ಮತ್ತು ತಾಳ–ಲಯ–ಬದ್ಧ ನರ್ತನ ಕಲಾಭಿಮಾನಿಗಳ ಮನಸೂರೆಗೊಂಡಿತು.</p>.<p>ಜಾನಕಿ ರಂಗರಾಜ್ ಅವರ ಶಿಷ್ಯೆಯಾಗಿರುವ ಅನಂಗ ಮುಂದಿನ ಬಾರಿಯೂ ಕಾಸರಗೋಡಿಗೆ ಬರುವ ಆಶಯದೊಂದಿಗೆ ನೃತ್ಯ ನಮನ ಸಲ್ಲಿಸಿದರು.</p>.<p>ಹಾಂಗ್ಕಾಂಗ್ನಿಂದ ಬಂದಿದ್ದ ಸಂಜಯ್ ವಡಪಳ್ಳಿ ಅವರ ನೃತ್ಯ ಪ್ರದರ್ಶನವೂ ನಂದಿ ಮಂಟಪದಲ್ಲಿ ರೋಮಾಂಚನ ಸೃಷ್ಟಿಸಿತು. ಮುಳಿಯ ಕುಟುಂಬದ ಆದ್ಯಾ ಸುಲೋಚನ, ಶಾರ್ವರಿ ಮಯ್ಯ ಹಾಗೂ ಮೈಸೂರಿನ ಕೆ.ಕುಮಾರ್ ಅವರಿಂದಲೂ ನೃತ್ಯ ವೈವಿಧ್ಯ ಪ್ರಸ್ತುತಗೊಂಡಿತು.</p>.<p>ನಂದಿಮಂಟಪ ಮತ್ತು ಧೇನು ಮಂಟಪದಲ್ಲಿ ಭರತನಾಟ್ಯ, ಮೋಹಿನಿಯಾಟ್ಟಂ, ಕೂಚಿಪುಡಿ, ಕೇರಳ ನಟನಂ, ಕಥಕ್ ಹಾಗೂ ತಿರುವಾದಿರಕ್ಕಳಿ ಮೊದಲಾದ ಶಾಸ್ತ್ರೀಯ ಮತ್ತು ಸಾಂಪ್ರದಾಯಿಕ ನೃತ್ಯ ಪ್ರಕಾರಗಳು ಮುದ ನೀಡಿದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-29-1790194358</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>