<p>ತ್ಯಾಗರ್ತಿ: ‘ಕಲಾ ಪ್ರೇಕ್ಷಕರಿಂದಲೇ ಕಲಾವಿದರ ಉಳಿವು’ ಎಂದು ಕಲಾವಿದ ಮಂಕಿ ಈಶ್ವರ ನಾಯ್ಕ ಹೇಳಿದರು.</p>.<p>ಆನಂದಪುರ ಯಕ್ಷ ಮಿತ್ರ ಬಳಗದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.</p>.<p>‘ಪುರಾಣ ಪುಣ್ಯ ಕಥೆಗಳನ್ನು ಯಕ್ಷಗಾನದ ಮುಖಾಂತರ ಪ್ರದರ್ಶಿಸುವ ಹಾಗೂ ಸಾಮಾಜಿಕ ಪರಿಸ್ಥಿತಿಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸಿ ಸಮಾಜವನ್ನು ತಿದ್ದುವ ಕೆಲಸವನ್ನು ಕಲಾವಿದರು ಮಾಡುತ್ತಿದ್ದಾರೆ. ಕಲಾವಿದರ ಸಂಪತ್ತೇ ಪ್ರೇಕ್ಷಕರ ಅಭಿಮಾನ’ ಎಂದರು.</p>.<p>ಸಾಲಿಗ್ರಾಮ ಮೇಳದ ‘ವಿಷ್ಣುವರ್ಧನ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನದ ರಂಗ ಸಜ್ಜಿಕೆಯಲ್ಲಿ ಪ್ರಸಂಗಕರ್ತ ಶಿವಪ್ರಸಾದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.</p>.<p>ಕಲಾ ಪೋಷಕರಾದ ಶಿರವಂತೆ ರಘುಪತಿ ಭಟ್, ಯಕ್ಷಮಿತ್ರ ಬಳಗದ ಆಚಾರ್ಯ ರಾಘು, ಕೊಲ್ಲಪ್ಪ ಗೌಡ ಜೇಡಿಸರ, ರಾಘವೇಂದ್ರ ಹೊಸೂರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260418-42-1419462417</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತ್ಯಾಗರ್ತಿ: ‘ಕಲಾ ಪ್ರೇಕ್ಷಕರಿಂದಲೇ ಕಲಾವಿದರ ಉಳಿವು’ ಎಂದು ಕಲಾವಿದ ಮಂಕಿ ಈಶ್ವರ ನಾಯ್ಕ ಹೇಳಿದರು.</p>.<p>ಆನಂದಪುರ ಯಕ್ಷ ಮಿತ್ರ ಬಳಗದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.</p>.<p>‘ಪುರಾಣ ಪುಣ್ಯ ಕಥೆಗಳನ್ನು ಯಕ್ಷಗಾನದ ಮುಖಾಂತರ ಪ್ರದರ್ಶಿಸುವ ಹಾಗೂ ಸಾಮಾಜಿಕ ಪರಿಸ್ಥಿತಿಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸಿ ಸಮಾಜವನ್ನು ತಿದ್ದುವ ಕೆಲಸವನ್ನು ಕಲಾವಿದರು ಮಾಡುತ್ತಿದ್ದಾರೆ. ಕಲಾವಿದರ ಸಂಪತ್ತೇ ಪ್ರೇಕ್ಷಕರ ಅಭಿಮಾನ’ ಎಂದರು.</p>.<p>ಸಾಲಿಗ್ರಾಮ ಮೇಳದ ‘ವಿಷ್ಣುವರ್ಧನ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನದ ರಂಗ ಸಜ್ಜಿಕೆಯಲ್ಲಿ ಪ್ರಸಂಗಕರ್ತ ಶಿವಪ್ರಸಾದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.</p>.<p>ಕಲಾ ಪೋಷಕರಾದ ಶಿರವಂತೆ ರಘುಪತಿ ಭಟ್, ಯಕ್ಷಮಿತ್ರ ಬಳಗದ ಆಚಾರ್ಯ ರಾಘು, ಕೊಲ್ಲಪ್ಪ ಗೌಡ ಜೇಡಿಸರ, ರಾಘವೇಂದ್ರ ಹೊಸೂರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260418-42-1419462417</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>