<p>ನಟ ರವಿಚಂದ್ರನ್ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರ ನಾಲ್ಕು ದಶಕಗಳ ಸಿನಿಪಯಣವನ್ನು ಸಂಭ್ರಮಿಸುವ ‘ಕ್ರೇಜಿ ಬ್ರಹ್ಮ’ ಕಾರ್ಯಕ್ರಮ ಮೇ 30ರಂದು ಬೆಂಗಳೂರಿನಲ್ಲಿ ನಡೆಯಲಿದೆ.</p>.<p>ಪ್ರಸ್ತುತ್ ಇನ್ನೋವೇಟಿವ್ ಸಂಸ್ಥೆಯು ಮೇ 30ರಂದು ಕೆಂಗೇರಿಯ ಜೆಕೆ ಗ್ರ್ಯಾಂಡ್ ಅರೇನಾದಲ್ಲಿ ಸಂಜೆ 6ರಿಂದ ರಾತ್ರಿ 12ರವರೆಗೂ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು,ರವಿಚಂದ್ರನ್ ಮತ್ತು ಹಂಸಲೇಖ ಜೋಡಿಯ ಪ್ರಮುಖ ಹಾಡುಗಳ ಗಾಯನ ಹಾಗೂ ಮರುಸೃಷ್ಟಿ ಇರಲಿದೆ. ದಕ್ಷಿಣ ಭಾರತದ ಹಲವು ಜನಪ್ರಿಯ ಕಲಾವಿದರು ಭಾಗವಹಿಸುವುದರ ಜೊತೆಗೆ, ರವಿಚಂದ್ರನ್ ಅವರ ಜೊತೆಗೆ ನಟಿಸಿದ ಹಲವು ನಟಿಯರು ಭಾಗವಹಿಸಲಿದ್ದಾರೆ.</p>.<p>‘ಒಂದು ಸಂಬಂಧದಲ್ಲಿ ಬಿರುಕು ಬಿಟ್ಟಾಗ ಸಂಭ್ರಮಿಸುವವರೇ ಜಾಸ್ತಿ. ಆದರೆ, ನಮ್ಮನ್ನು ಸೇರಿಸುವುದಕ್ಕೆ ಹಲವರು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮಿಬ್ಬರದ್ದು ಚಿತ್ರರಂಗ ಕಂಡ ಅತ್ಯುತ್ತಮ ಜೋಡಿ. ನನ್ನನ್ನು ‘ಕ್ರೇಜಿ ಸ್ಟಾರ್’ ಮಾಡಿದ್ದು ಅವರೇ’ ಎಂದರು ರವಿಚಂದ್ರನ್.</p>.<p>‘ಈ ನೆನಪಿನ ದೋಣಿಯಲ್ಲಿ ಅಭಿಮಾನಿಗಳನ್ನು ತೇಲಿಸುವ ಕೆಲಸವನ್ನು ಮಾಡುತ್ತೇವೆ. ಇದು ಯಶಸ್ವಿಯಾದರೆ ಇನ್ನಷ್ಟು ಕಾರ್ಯಕ್ರಮಗಳನ್ನು ಮಾಡಬಹುದು’ ಎಂದರು ಹಂಸಲೇಖ.v</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260328-51-441868706</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಟ ರವಿಚಂದ್ರನ್ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರ ನಾಲ್ಕು ದಶಕಗಳ ಸಿನಿಪಯಣವನ್ನು ಸಂಭ್ರಮಿಸುವ ‘ಕ್ರೇಜಿ ಬ್ರಹ್ಮ’ ಕಾರ್ಯಕ್ರಮ ಮೇ 30ರಂದು ಬೆಂಗಳೂರಿನಲ್ಲಿ ನಡೆಯಲಿದೆ.</p>.<p>ಪ್ರಸ್ತುತ್ ಇನ್ನೋವೇಟಿವ್ ಸಂಸ್ಥೆಯು ಮೇ 30ರಂದು ಕೆಂಗೇರಿಯ ಜೆಕೆ ಗ್ರ್ಯಾಂಡ್ ಅರೇನಾದಲ್ಲಿ ಸಂಜೆ 6ರಿಂದ ರಾತ್ರಿ 12ರವರೆಗೂ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು,ರವಿಚಂದ್ರನ್ ಮತ್ತು ಹಂಸಲೇಖ ಜೋಡಿಯ ಪ್ರಮುಖ ಹಾಡುಗಳ ಗಾಯನ ಹಾಗೂ ಮರುಸೃಷ್ಟಿ ಇರಲಿದೆ. ದಕ್ಷಿಣ ಭಾರತದ ಹಲವು ಜನಪ್ರಿಯ ಕಲಾವಿದರು ಭಾಗವಹಿಸುವುದರ ಜೊತೆಗೆ, ರವಿಚಂದ್ರನ್ ಅವರ ಜೊತೆಗೆ ನಟಿಸಿದ ಹಲವು ನಟಿಯರು ಭಾಗವಹಿಸಲಿದ್ದಾರೆ.</p>.<p>‘ಒಂದು ಸಂಬಂಧದಲ್ಲಿ ಬಿರುಕು ಬಿಟ್ಟಾಗ ಸಂಭ್ರಮಿಸುವವರೇ ಜಾಸ್ತಿ. ಆದರೆ, ನಮ್ಮನ್ನು ಸೇರಿಸುವುದಕ್ಕೆ ಹಲವರು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮಿಬ್ಬರದ್ದು ಚಿತ್ರರಂಗ ಕಂಡ ಅತ್ಯುತ್ತಮ ಜೋಡಿ. ನನ್ನನ್ನು ‘ಕ್ರೇಜಿ ಸ್ಟಾರ್’ ಮಾಡಿದ್ದು ಅವರೇ’ ಎಂದರು ರವಿಚಂದ್ರನ್.</p>.<p>‘ಈ ನೆನಪಿನ ದೋಣಿಯಲ್ಲಿ ಅಭಿಮಾನಿಗಳನ್ನು ತೇಲಿಸುವ ಕೆಲಸವನ್ನು ಮಾಡುತ್ತೇವೆ. ಇದು ಯಶಸ್ವಿಯಾದರೆ ಇನ್ನಷ್ಟು ಕಾರ್ಯಕ್ರಮಗಳನ್ನು ಮಾಡಬಹುದು’ ಎಂದರು ಹಂಸಲೇಖ.v</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260328-51-441868706</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>