<p>ದಾವಣಗೆರೆ: ನಗರದ ಪ್ರತಿಷ್ಠಿತ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಸಾಂಸ್ಕೃತಿಕ ಮಹೋತ್ಸವ ಶೃಂಗ –2026 ಕಾರ್ಯಕ್ರಮವು ಶುಕ್ರವಾರ ಹಾಗೂ ಶನಿವಾರ ಅದ್ದೂರಿಯಾಗಿ ನಡೆಯಿತು.</p>.<p>2 ದಿನಗಳ ಈ ಸಂಭ್ರಮಾಚರಣೆಯು ವಿದ್ಯಾರ್ಥಿಗಳ ಉತ್ಸಾಹ, ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರತಿಬಿಂಬಿಸುವ ಮಹತ್ವದ ವೇದಿಕೆಯಾಗಿತ್ತು.</p>.<p>ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎಸ್ಪಿ ಶೇಖರ್ ಎಚ್.ಟಿ., ಪದ್ಮಶ್ರೀ ಪುರಸ್ಕೃತ ಸುರೇಶ್ ಹನಗವಾಡಿ, ಜೆಜೆಎಂ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರು, ಜೈನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಅಚಲಚಂದ್ ಜೈನ್ ಹಾಗೂ ಟ್ರಸ್ಟಿ ಕುನಾಲ್ ಬಿ. ಪರ್ಮಾರ್ ಅವರು ಉಪಸ್ಥಿತರಿದ್ದರು.</p>.<p>ಖ್ಯಾತ ಗಾಯಕ ಹಾಗೂ ನಟ ರಾಜೇಶ್ ಕೃಷ್ಣನ್ ಅವರು ಸೆಲೆಬ್ರಿಟಿ ಅತಿಥಿಯಾಗಿ ಭಾಗವಹಿಸಿದ್ದರು. ಸಂಗೀತ ಸಂಜೆನಲ್ಲಿ ರಾಜೇಶ್ ಕೃಷ್ಣನ್ ಅವರು ತಮ್ಮ ಗಾಯನದಿಂದ ಎಲ್ಲರನ್ನು ಮನರಂಜಿಸಿದರು.</p>.<p>ಶೃಂಗ ವಾರ್ಷಿಕ ವರದಿಯನ್ನು ಸಂಚಾಲಕ ರಾಹುಲ್ ಪಾಟೀಲ್ ಮಂಡಿಸಿದರು. ಅಕಾಡೆಮಿಕ್ ವರದಿಯನ್ನು ಡೀನ್ ಅಕಾಡೆಮಿಕ್ಸ್ ಪ್ರಕಾಶ್ ಕೆ.ಬಿ. ಮಂಡಿಸಿದರು. ಪ್ರಾಂಶುಪಾಲ ಗಣೇಶ್ ಡಿ.ಬಿ. ಅವರನ್ನು ಸನ್ಮಾನಿಸಲಾಯಿತು.</p>.<p>ಸಲಹೆಗಾರರಾದ ಮಂಜಪ್ಪ ಸಾರಥಿ, ಡೀನ್ ಅಕಾಡೆಮಿಕ್ಸ್ ಡಾ. ಪ್ರಕಾಶ್ ಕೆ.ಬಿ., ಸಂಚಾಲಕರಾದ ರಾಹುಲ್ ಪಾಟೀಲ್, ಸಾಂಸ್ಕೃತಿಕ ಸಂಯೋಜಕರಾದ ಪ್ರೊ. ಸವಿತಾ ಮಮದಾಪುರ ಹಾಗೂ ಕ್ರೀಡಾ ಸಂಯೋಜಕ ಚೇತನ್ ಎಚ್. ಆರ್. ಸೇರಿದಂತೆ ಹಲವಾರು ಅಧ್ಯಾಪಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260412-43-1727289801</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ನಗರದ ಪ್ರತಿಷ್ಠಿತ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಸಾಂಸ್ಕೃತಿಕ ಮಹೋತ್ಸವ ಶೃಂಗ –2026 ಕಾರ್ಯಕ್ರಮವು ಶುಕ್ರವಾರ ಹಾಗೂ ಶನಿವಾರ ಅದ್ದೂರಿಯಾಗಿ ನಡೆಯಿತು.</p>.<p>2 ದಿನಗಳ ಈ ಸಂಭ್ರಮಾಚರಣೆಯು ವಿದ್ಯಾರ್ಥಿಗಳ ಉತ್ಸಾಹ, ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರತಿಬಿಂಬಿಸುವ ಮಹತ್ವದ ವೇದಿಕೆಯಾಗಿತ್ತು.</p>.<p>ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎಸ್ಪಿ ಶೇಖರ್ ಎಚ್.ಟಿ., ಪದ್ಮಶ್ರೀ ಪುರಸ್ಕೃತ ಸುರೇಶ್ ಹನಗವಾಡಿ, ಜೆಜೆಎಂ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರು, ಜೈನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಅಚಲಚಂದ್ ಜೈನ್ ಹಾಗೂ ಟ್ರಸ್ಟಿ ಕುನಾಲ್ ಬಿ. ಪರ್ಮಾರ್ ಅವರು ಉಪಸ್ಥಿತರಿದ್ದರು.</p>.<p>ಖ್ಯಾತ ಗಾಯಕ ಹಾಗೂ ನಟ ರಾಜೇಶ್ ಕೃಷ್ಣನ್ ಅವರು ಸೆಲೆಬ್ರಿಟಿ ಅತಿಥಿಯಾಗಿ ಭಾಗವಹಿಸಿದ್ದರು. ಸಂಗೀತ ಸಂಜೆನಲ್ಲಿ ರಾಜೇಶ್ ಕೃಷ್ಣನ್ ಅವರು ತಮ್ಮ ಗಾಯನದಿಂದ ಎಲ್ಲರನ್ನು ಮನರಂಜಿಸಿದರು.</p>.<p>ಶೃಂಗ ವಾರ್ಷಿಕ ವರದಿಯನ್ನು ಸಂಚಾಲಕ ರಾಹುಲ್ ಪಾಟೀಲ್ ಮಂಡಿಸಿದರು. ಅಕಾಡೆಮಿಕ್ ವರದಿಯನ್ನು ಡೀನ್ ಅಕಾಡೆಮಿಕ್ಸ್ ಪ್ರಕಾಶ್ ಕೆ.ಬಿ. ಮಂಡಿಸಿದರು. ಪ್ರಾಂಶುಪಾಲ ಗಣೇಶ್ ಡಿ.ಬಿ. ಅವರನ್ನು ಸನ್ಮಾನಿಸಲಾಯಿತು.</p>.<p>ಸಲಹೆಗಾರರಾದ ಮಂಜಪ್ಪ ಸಾರಥಿ, ಡೀನ್ ಅಕಾಡೆಮಿಕ್ಸ್ ಡಾ. ಪ್ರಕಾಶ್ ಕೆ.ಬಿ., ಸಂಚಾಲಕರಾದ ರಾಹುಲ್ ಪಾಟೀಲ್, ಸಾಂಸ್ಕೃತಿಕ ಸಂಯೋಜಕರಾದ ಪ್ರೊ. ಸವಿತಾ ಮಮದಾಪುರ ಹಾಗೂ ಕ್ರೀಡಾ ಸಂಯೋಜಕ ಚೇತನ್ ಎಚ್. ಆರ್. ಸೇರಿದಂತೆ ಹಲವಾರು ಅಧ್ಯಾಪಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260412-43-1727289801</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>