<p>ಇಳಕಲ್ : ಗಾಯಕ ಪಿ.ಬಿ.ಶ್ರೀನಿವಾಸ ಅವರ 13ನೇ ಪುಣ್ಯಸ್ಮರಣೆ ಅಂಗವಾಗಿ ಪಿ.ಬಿ.ಶ್ರೀನಿವಾಸ ಅವರ ಹಾಡುಗಳ ಗಾಯನ ಹಾಗೂ ಸತ್ಕಾರ ಕಾರ್ಯಕ್ರಮ ಏ.18ರಂದು ಸಂಜೆ 6.30ಕ್ಕೆ ವಿಜಯ ಮಹಾಂತೇಶ ಅನುಭವ ಮಂಟಪದ ಆವರಣದಲ್ಲಿ ನಡೆಯಲಿದೆ.</p>.<p>ಪಿ.ಬಿ.ಶ್ರೀನಿವಾಸ ಅವರ ಅಭಿಮಾನಿ, ಪುಣೆಯಲ್ಲಿ ಉದ್ಯಮಿ ಆಗಿರುವ ರವೀಂದ್ರ ಅಂಬಣ್ಣ ದೇವಗಿರಿಕರ್ ಅವರು ಸ್ನೇಹರಂಗದ ಸಹಯೋಗದಲ್ಲಿ ಸತತ 13ವರ್ಷದಿಂದ ಪಿಬಿಎಸ್ ಸ್ಮರಣೆಯ ಕಾರ್ಯಕ್ರಮ ಆಯೋಜಿಸಿದ್ದು, ಸ್ಥಳೀಯ ಪ್ರತಿಭಾವಂತ ಗಾಯಕರಿಂದ ಗಾಯನ, ಹಿರಿಯ ರಂಗಭೂಮಿ ಕಲಾವಿದರಿಗೆ ಆರ್ಥಿಕ ನೆರವು ಹಾಗೂ ಸತ್ಕಾರ ಹಮ್ಮಿಕೊಂಡಿದ್ದಾರೆ.</p>.<p>ಇಳಕಲ್ ಗುರುಮಹಾಂತ ಶ್ರೀ ಸಾನ್ನಿಧ್ಯ ವಹಿಸುವರು, ಶಿರೂರಿನ ಬಸವಲಿಂಗ ಶ್ರೀ ಅಧ್ಯಕ್ಷತೆ ವಹಿಸುವರು. ದೂರದರ್ಶನ ಚಂದನ ಟಿವಿ ನಿರೂಪಕ ಸಾರ್ಥವಳ್ಳಿ ನಾರಾಯಣಸ್ವಾಮಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.</p>.<p>ರಂಗಭೂಮಿ ಹಿರಿಯ ಕಲಾವಿದೆ ಸುಗುಣಾದೇವಿ ಸಪ್ಪಂಡಿ ಹಾಗೂ ವಿಶೇಷ ಆಹ್ವಾನಿತ ಸಮಾಜಸೇವಕ ಸಿದ್ಧಣ್ಣ ಭಮಸಾಗರ ಅವರನ್ನು ಸನ್ಮಾನಿಸಲಾಗುವುದು.</p>.<p>ಔದ್ಯೋಗಿಕ ಸಲಹೆಗಾರ ರವೀಂದ್ರ ದೇವಗಿರಿಕರ, ಸ್ನೇಹರಂಗ ಅಧ್ಯಕ್ಷ ಬಸವರಾಜ ಮಠದ ಪಾಲ್ಗೊಳ್ಳುವರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260418-19-359080554</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಳಕಲ್ : ಗಾಯಕ ಪಿ.ಬಿ.ಶ್ರೀನಿವಾಸ ಅವರ 13ನೇ ಪುಣ್ಯಸ್ಮರಣೆ ಅಂಗವಾಗಿ ಪಿ.ಬಿ.ಶ್ರೀನಿವಾಸ ಅವರ ಹಾಡುಗಳ ಗಾಯನ ಹಾಗೂ ಸತ್ಕಾರ ಕಾರ್ಯಕ್ರಮ ಏ.18ರಂದು ಸಂಜೆ 6.30ಕ್ಕೆ ವಿಜಯ ಮಹಾಂತೇಶ ಅನುಭವ ಮಂಟಪದ ಆವರಣದಲ್ಲಿ ನಡೆಯಲಿದೆ.</p>.<p>ಪಿ.ಬಿ.ಶ್ರೀನಿವಾಸ ಅವರ ಅಭಿಮಾನಿ, ಪುಣೆಯಲ್ಲಿ ಉದ್ಯಮಿ ಆಗಿರುವ ರವೀಂದ್ರ ಅಂಬಣ್ಣ ದೇವಗಿರಿಕರ್ ಅವರು ಸ್ನೇಹರಂಗದ ಸಹಯೋಗದಲ್ಲಿ ಸತತ 13ವರ್ಷದಿಂದ ಪಿಬಿಎಸ್ ಸ್ಮರಣೆಯ ಕಾರ್ಯಕ್ರಮ ಆಯೋಜಿಸಿದ್ದು, ಸ್ಥಳೀಯ ಪ್ರತಿಭಾವಂತ ಗಾಯಕರಿಂದ ಗಾಯನ, ಹಿರಿಯ ರಂಗಭೂಮಿ ಕಲಾವಿದರಿಗೆ ಆರ್ಥಿಕ ನೆರವು ಹಾಗೂ ಸತ್ಕಾರ ಹಮ್ಮಿಕೊಂಡಿದ್ದಾರೆ.</p>.<p>ಇಳಕಲ್ ಗುರುಮಹಾಂತ ಶ್ರೀ ಸಾನ್ನಿಧ್ಯ ವಹಿಸುವರು, ಶಿರೂರಿನ ಬಸವಲಿಂಗ ಶ್ರೀ ಅಧ್ಯಕ್ಷತೆ ವಹಿಸುವರು. ದೂರದರ್ಶನ ಚಂದನ ಟಿವಿ ನಿರೂಪಕ ಸಾರ್ಥವಳ್ಳಿ ನಾರಾಯಣಸ್ವಾಮಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.</p>.<p>ರಂಗಭೂಮಿ ಹಿರಿಯ ಕಲಾವಿದೆ ಸುಗುಣಾದೇವಿ ಸಪ್ಪಂಡಿ ಹಾಗೂ ವಿಶೇಷ ಆಹ್ವಾನಿತ ಸಮಾಜಸೇವಕ ಸಿದ್ಧಣ್ಣ ಭಮಸಾಗರ ಅವರನ್ನು ಸನ್ಮಾನಿಸಲಾಗುವುದು.</p>.<p>ಔದ್ಯೋಗಿಕ ಸಲಹೆಗಾರ ರವೀಂದ್ರ ದೇವಗಿರಿಕರ, ಸ್ನೇಹರಂಗ ಅಧ್ಯಕ್ಷ ಬಸವರಾಜ ಮಠದ ಪಾಲ್ಗೊಳ್ಳುವರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260418-19-359080554</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>