<p>ಕಲಬುರಗಿ: ‘ಸಂಗೀತ ಕಲಿಕೆಯಲ್ಲಿ ಯುವಪೀಳಿಗೆ ಬಹಳ ಉತ್ಸುಕತೆ ತೋರಿಸುತ್ತಿದೆ. ಗುರುಗಳಿಂದ ವಿದ್ಯೆ ಪಡೆದು ನಿರಂತರವಾಗಿ ಅಭ್ಯಾಸ ಮಾಡಿದಾಗ ಮಾತ್ರ ಸಾಧನೆ ಸಾಧ್ಯ’ ಎಂದು ಹಿರಿಯ ವಕೀಲ ಎಸ್.ವಿ.ದೇಶಮುಖ ಹೇಳಿದರು.</p>.<p>ಶಂಕರ ಶ್ರೀ ಸಾಂಸ್ಕೃತಿಕ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈಚೆಗೆ ನಗರದಲ್ಲಿ ನಡೆದ ನಾದೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಪ್ರತಿಯೊಂದಕ್ಕೂ ಪರಿಶ್ರಮ ಮುಖ್ಯ’ ಎಂದರು.</p>.<p>ಮುಖಂಡ ಶಿವರಾಯ ಹೂಗಾರ ಮಾತನಾಡಿ, ‘ವಿದ್ಯೆಗಳಲ್ಲಿ ಸಂಗೀತ ವಿದ್ಯೆ ಶ್ರೇಷ್ಠ. ಅದನ್ನು ಪೋಷಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಹೇಳಿದರು.</p>.<p>ದತ್ತರಾಜ ಕಲಶೆಟ್ಟಿ, ಮಲ್ಲಿಕಾರ್ಜುನ ಮಣ್ಣೂರ, ಸಂಗಮೇಶ ನೀಲಾ, ತೋಟಯ್ಯ ಶಾಸ್ತ್ರಿ, ಶಿವಶರಣಯ್ಯ ಸ್ವಾಮಿ, ಶಿವಶರಣ ಪೂಜಾರಿ, ಕಲ್ಮೇಶ ಹೂಗಾರ, ರೇವಣಸಿದ್ದ ಹೂಗಾರ, ಮನೋಹರ ಟೇಂಗಳಿ, ಪೂಜಾ ಮಡಿವಾಳ, ಬಸವರಾಜ ಮಡಿವಾಳ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ಸಂಗಣ್ಣಗೌಡ ಎಸ್.ಎಂ., ಸಿದ್ದಣ್ಣ ಅಂಬಲಗಿ, ಪ್ರಕಾಶ ಪಾಟೀಲ ಹಾಜರಿದ್ದರು. ಸಂಸ್ಥೆಯ ಅಧ್ಯಕ್ಷ ಜಗದೀಶ ಹೂಗಾರ ನಿರೂಪಿಸಿದರು. ಹಿರಿಯ ಸಂಗೀತ ಕಲಾವಿದ ಸಿದ್ದಣ್ಣ ಹೂಗಾರ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260521-34-1407692267</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ‘ಸಂಗೀತ ಕಲಿಕೆಯಲ್ಲಿ ಯುವಪೀಳಿಗೆ ಬಹಳ ಉತ್ಸುಕತೆ ತೋರಿಸುತ್ತಿದೆ. ಗುರುಗಳಿಂದ ವಿದ್ಯೆ ಪಡೆದು ನಿರಂತರವಾಗಿ ಅಭ್ಯಾಸ ಮಾಡಿದಾಗ ಮಾತ್ರ ಸಾಧನೆ ಸಾಧ್ಯ’ ಎಂದು ಹಿರಿಯ ವಕೀಲ ಎಸ್.ವಿ.ದೇಶಮುಖ ಹೇಳಿದರು.</p>.<p>ಶಂಕರ ಶ್ರೀ ಸಾಂಸ್ಕೃತಿಕ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈಚೆಗೆ ನಗರದಲ್ಲಿ ನಡೆದ ನಾದೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಪ್ರತಿಯೊಂದಕ್ಕೂ ಪರಿಶ್ರಮ ಮುಖ್ಯ’ ಎಂದರು.</p>.<p>ಮುಖಂಡ ಶಿವರಾಯ ಹೂಗಾರ ಮಾತನಾಡಿ, ‘ವಿದ್ಯೆಗಳಲ್ಲಿ ಸಂಗೀತ ವಿದ್ಯೆ ಶ್ರೇಷ್ಠ. ಅದನ್ನು ಪೋಷಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಹೇಳಿದರು.</p>.<p>ದತ್ತರಾಜ ಕಲಶೆಟ್ಟಿ, ಮಲ್ಲಿಕಾರ್ಜುನ ಮಣ್ಣೂರ, ಸಂಗಮೇಶ ನೀಲಾ, ತೋಟಯ್ಯ ಶಾಸ್ತ್ರಿ, ಶಿವಶರಣಯ್ಯ ಸ್ವಾಮಿ, ಶಿವಶರಣ ಪೂಜಾರಿ, ಕಲ್ಮೇಶ ಹೂಗಾರ, ರೇವಣಸಿದ್ದ ಹೂಗಾರ, ಮನೋಹರ ಟೇಂಗಳಿ, ಪೂಜಾ ಮಡಿವಾಳ, ಬಸವರಾಜ ಮಡಿವಾಳ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ಸಂಗಣ್ಣಗೌಡ ಎಸ್.ಎಂ., ಸಿದ್ದಣ್ಣ ಅಂಬಲಗಿ, ಪ್ರಕಾಶ ಪಾಟೀಲ ಹಾಜರಿದ್ದರು. ಸಂಸ್ಥೆಯ ಅಧ್ಯಕ್ಷ ಜಗದೀಶ ಹೂಗಾರ ನಿರೂಪಿಸಿದರು. ಹಿರಿಯ ಸಂಗೀತ ಕಲಾವಿದ ಸಿದ್ದಣ್ಣ ಹೂಗಾರ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260521-34-1407692267</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>