<p>ಮೈಸೂರು: ಶ್ರೀಗುರು ಪುಟ್ಟರಾಜ ಸಂಗೀತ ಸಭಾದಿಂದ ಬೆಂಗಳೂರಿನ ತಬಲವಾದಕ ಪಂಡಿತ್ ರಾಜೇಂದ್ರ ನಾಕೋಡ ಅವರಿಗೆ ಪ್ರಸಕ್ತ ಸಾಲಿನ ‘ಪಂಡಿತ್ ಕೆ.ಎಸ್.ಹಡಪದ’ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು.</p>.<p>ಇಲ್ಲಿನ ಕುವೆಂಪುನಗರದ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ನಡೆದ ಪಂಡಿತ್ ಕೆ.ಎಸ್.ಹಡಪದ 20ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಭಾದ ಗೌರವಾಧ್ಯಕ್ಷ ಎಂ.ವಿ.ರಾಮಪ್ರಸಾದ್ ಪ್ರಶಸ್ತಿ ಪ್ರದಾನ ಮಾಡಿದರು.</p>.<p>‘ಮೈಸೂರು ಎಲ್ಲಾ ಕಲೆ ಪ್ರೋತ್ಸಾಹಿಸುವ ಸ್ಥಳವಾಗಿದ್ದು, ಇದನ್ನು ಉಳಿಸಿಕೊಳ್ಳುವ ಹೊಣೆ ಯುವಜನರ ಮೇಲಿದೆ’ ಎಂದರು.</p>.<p>ಪರಮಹಂಸ ವಿದ್ಯಾನಿಕೇತನ ಟ್ರಸ್ಟ್ನ ಸಲಹೆಗಾರ ಕೆ.ಎನ್.ನವೀನ್ಕುಮಾರ್, ಸಭಾ ಅಧ್ಯಕ್ಷ ಪಂಡಿತ್ ಭೀಮಾಶಂಕರ ಬಿದನೂರ, ಉಪಾಧ್ಯಕ್ಷ ಮೃತ್ಯುಂಜಯ ಹಿರೇಮಠ ಉಪಸ್ಥಿತರಿದ್ದರು.</p>.<p>ರೋಹಿಣಿ ಎಸ್. ಓಂಕಾರ್ ನಿರೂಪಿಸಿದರು. ಬೆಂಗಳೂರಿನ ವಿದುಷಿ ಅಂತರಭಟ್ ಅವರ ಬಾನ್ಸುರಿ ಹಾಗೂ ವಿದ್ವಾನ್ ಅರುಣ್ ಭಟ್ ಅವರ ತಬಲಾ ವಾದನ ಗಮನ ಸೆಳೆಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260601-39-1245580142</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಶ್ರೀಗುರು ಪುಟ್ಟರಾಜ ಸಂಗೀತ ಸಭಾದಿಂದ ಬೆಂಗಳೂರಿನ ತಬಲವಾದಕ ಪಂಡಿತ್ ರಾಜೇಂದ್ರ ನಾಕೋಡ ಅವರಿಗೆ ಪ್ರಸಕ್ತ ಸಾಲಿನ ‘ಪಂಡಿತ್ ಕೆ.ಎಸ್.ಹಡಪದ’ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು.</p>.<p>ಇಲ್ಲಿನ ಕುವೆಂಪುನಗರದ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ನಡೆದ ಪಂಡಿತ್ ಕೆ.ಎಸ್.ಹಡಪದ 20ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಭಾದ ಗೌರವಾಧ್ಯಕ್ಷ ಎಂ.ವಿ.ರಾಮಪ್ರಸಾದ್ ಪ್ರಶಸ್ತಿ ಪ್ರದಾನ ಮಾಡಿದರು.</p>.<p>‘ಮೈಸೂರು ಎಲ್ಲಾ ಕಲೆ ಪ್ರೋತ್ಸಾಹಿಸುವ ಸ್ಥಳವಾಗಿದ್ದು, ಇದನ್ನು ಉಳಿಸಿಕೊಳ್ಳುವ ಹೊಣೆ ಯುವಜನರ ಮೇಲಿದೆ’ ಎಂದರು.</p>.<p>ಪರಮಹಂಸ ವಿದ್ಯಾನಿಕೇತನ ಟ್ರಸ್ಟ್ನ ಸಲಹೆಗಾರ ಕೆ.ಎನ್.ನವೀನ್ಕುಮಾರ್, ಸಭಾ ಅಧ್ಯಕ್ಷ ಪಂಡಿತ್ ಭೀಮಾಶಂಕರ ಬಿದನೂರ, ಉಪಾಧ್ಯಕ್ಷ ಮೃತ್ಯುಂಜಯ ಹಿರೇಮಠ ಉಪಸ್ಥಿತರಿದ್ದರು.</p>.<p>ರೋಹಿಣಿ ಎಸ್. ಓಂಕಾರ್ ನಿರೂಪಿಸಿದರು. ಬೆಂಗಳೂರಿನ ವಿದುಷಿ ಅಂತರಭಟ್ ಅವರ ಬಾನ್ಸುರಿ ಹಾಗೂ ವಿದ್ವಾನ್ ಅರುಣ್ ಭಟ್ ಅವರ ತಬಲಾ ವಾದನ ಗಮನ ಸೆಳೆಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260601-39-1245580142</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>