<p>ಸಿಂಧನೂರು: ‘ಸಂಗೀತ ಕೇಳುವುದರಿಂದ ಅಂತರಂಗದ ಕಲುಷಿತ ಭಾವನೆಗಳು ದೂರವಾಗಿ ಮನಸ್ಸು ಶುದ್ಧೀಕರಣಗೊಳ್ಳುತ್ತದೆ’ ಎಂದು ಸಂಸ್ಕಾರ ಭಾರತಿ ಅಧ್ಯಕ್ಷ ವೆಂಕಣ್ಣ ಜೋಶಿ ಅಭಿಪ್ರಾಯಪಟ್ಟರು.</p>.<p>ನಗರದ ಎಪಿಎಂಸಿ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ರಾಗ್ ಸಿಂಧು ಮ್ಯೂಸಿಕ್ ಅಕಾಡೆಮಿಯಿಂದ ಯುಗಾದಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಭಕ್ತಿ ಸುಧೆ ಮಾಸಿಕ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಸಂಗೀತ ಕಾರ್ಯಕ್ರಮದಿಂದ ಮಾನಸಿಕ ನೆಮ್ಮದಿ ಲಭಿಸುವುದಲ್ಲದೆ ದೇಶದ ಪರಂಪರೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು.</p>.<p>‘ಸಿಂಧನೂರಿನ ಸಂಗೀತಗಾರ ವಿಜಯಕುಮಾರ ಜಿ.ಹಿರೇಮಠ ಅವರು ಧಾರವಾಡದಲ್ಲಿ 7 ವರ್ಷಗಳ ಕಾಲ ಸಂಗೀತ ಅಧ್ಯಯನ ಮಾಡಿ, ಪ್ರಸ್ತುತ ಸಿಂಧನೂರಿನಲ್ಲಿ ರಾಗ್ ಸಿಂಧು ಮ್ಯೂಸಿಕ್ ಅಕಾಡೆಮಿ ಪ್ರಾರಂಭಿಸಿದ್ದಾರೆ. ಅವರು ಸಂಗೀತ ತರಬೇತಿ ನೀಡುತ್ತಿರುವುದರಿಂದ ಸಿಂಧನೂರಿನ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ’ ಎಂದು ಹೇಳಿದರು.</p>.<p>ಬಾಲ ಕಲಾವಿದರಾದ ಸ್ವರ, ಅನಿರುದ್ಧ, ರಿತಿಕಾ, ಸಾನ್ವಿ, ನಿಸರ್ಗ ಹಾಡುಗಳನ್ನು ಹಾಡಿ ನೆರೆದಿದ್ದ ಪ್ರೇಕ್ಷಕರ ಗಮನ ಸೆಳೆದರು.</p>.<p>ನಂತರ ಸಂಗೀತಗಾರ ವಿಜಯಕುಮಾರ ಹಿರೇಮಠ ವಿವಿಧ ಹಾಡುಗಳನ್ನು ಹಾಡಿದರು. ಇದೇ ವೇಳೆ ವಿರಾಟ್ ಬದಿ ಕೊಳಲು, ಮಹಾಂತಯ್ಯ ಗೊನವಾರ ಹಾರ್ಮೋನಿಯಂ, ಗಣಪತಿ ಪೂಜಾರ್ ದಿನ್ನಿ ತಬಲಾ ಸಾಥ್ ನೀಡಿದರು. </p>.<p>ಮುಖಂಡರಾದ ಗವಿಸಿದ್ದಯ್ಯ ಹಿರೇಮಠ, ಶರಣಯ್ಯ ಸ್ವಾಮಿ, ಅಮರಯ್ಯ ಸ್ವಾಮಿ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260323-32-505893088</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿಂಧನೂರು: ‘ಸಂಗೀತ ಕೇಳುವುದರಿಂದ ಅಂತರಂಗದ ಕಲುಷಿತ ಭಾವನೆಗಳು ದೂರವಾಗಿ ಮನಸ್ಸು ಶುದ್ಧೀಕರಣಗೊಳ್ಳುತ್ತದೆ’ ಎಂದು ಸಂಸ್ಕಾರ ಭಾರತಿ ಅಧ್ಯಕ್ಷ ವೆಂಕಣ್ಣ ಜೋಶಿ ಅಭಿಪ್ರಾಯಪಟ್ಟರು.</p>.<p>ನಗರದ ಎಪಿಎಂಸಿ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ರಾಗ್ ಸಿಂಧು ಮ್ಯೂಸಿಕ್ ಅಕಾಡೆಮಿಯಿಂದ ಯುಗಾದಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಭಕ್ತಿ ಸುಧೆ ಮಾಸಿಕ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಸಂಗೀತ ಕಾರ್ಯಕ್ರಮದಿಂದ ಮಾನಸಿಕ ನೆಮ್ಮದಿ ಲಭಿಸುವುದಲ್ಲದೆ ದೇಶದ ಪರಂಪರೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು.</p>.<p>‘ಸಿಂಧನೂರಿನ ಸಂಗೀತಗಾರ ವಿಜಯಕುಮಾರ ಜಿ.ಹಿರೇಮಠ ಅವರು ಧಾರವಾಡದಲ್ಲಿ 7 ವರ್ಷಗಳ ಕಾಲ ಸಂಗೀತ ಅಧ್ಯಯನ ಮಾಡಿ, ಪ್ರಸ್ತುತ ಸಿಂಧನೂರಿನಲ್ಲಿ ರಾಗ್ ಸಿಂಧು ಮ್ಯೂಸಿಕ್ ಅಕಾಡೆಮಿ ಪ್ರಾರಂಭಿಸಿದ್ದಾರೆ. ಅವರು ಸಂಗೀತ ತರಬೇತಿ ನೀಡುತ್ತಿರುವುದರಿಂದ ಸಿಂಧನೂರಿನ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ’ ಎಂದು ಹೇಳಿದರು.</p>.<p>ಬಾಲ ಕಲಾವಿದರಾದ ಸ್ವರ, ಅನಿರುದ್ಧ, ರಿತಿಕಾ, ಸಾನ್ವಿ, ನಿಸರ್ಗ ಹಾಡುಗಳನ್ನು ಹಾಡಿ ನೆರೆದಿದ್ದ ಪ್ರೇಕ್ಷಕರ ಗಮನ ಸೆಳೆದರು.</p>.<p>ನಂತರ ಸಂಗೀತಗಾರ ವಿಜಯಕುಮಾರ ಹಿರೇಮಠ ವಿವಿಧ ಹಾಡುಗಳನ್ನು ಹಾಡಿದರು. ಇದೇ ವೇಳೆ ವಿರಾಟ್ ಬದಿ ಕೊಳಲು, ಮಹಾಂತಯ್ಯ ಗೊನವಾರ ಹಾರ್ಮೋನಿಯಂ, ಗಣಪತಿ ಪೂಜಾರ್ ದಿನ್ನಿ ತಬಲಾ ಸಾಥ್ ನೀಡಿದರು. </p>.<p>ಮುಖಂಡರಾದ ಗವಿಸಿದ್ದಯ್ಯ ಹಿರೇಮಠ, ಶರಣಯ್ಯ ಸ್ವಾಮಿ, ಅಮರಯ್ಯ ಸ್ವಾಮಿ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260323-32-505893088</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>