<p>ಸಾಗರ: ‘ನಿವೃತ್ತ ಯೋಧ ಜಿ.ಎಸ್. ವೆಂಕಟೇಶ್ ರಚಿಸಿರುವ ‘ಪಾಂಚಜನ್ಯ’ ಕವನ ಸಂಕಲನದಲ್ಲಿನ ಕವಿತೆಗಳು ವಾಸ್ತವಿಕ ನೆಲೆಗಟ್ಟಿನಿಂದ ಕಸುವು ಹೆಚ್ಚಿಸಿಕೊಂಡಿವೆ’ ಎಂದು ಶಿಕ್ಷಣ ಸಂಯೋಜಕ ಶಂಕರ ಶಾಸ್ತ್ರಿ ಹೇಳಿದರು.</p>.<p>ಇಲ್ಲಿನ ಪ್ರಗತಿ ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ಪಾಂಚಜನ್ಯ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.</p>.<p>‘ವೆಂಕಟೇಶ್ ಅವರ ಜೀವನಾನುಭವದ ಪ್ರತಿಬಿಂಬಗಳು ಕವಿತೆಗಳಲ್ಲಿ ದಟ್ಟವಾಗಿ ಅಭಿವ್ಯಕ್ತಗೊಂಡಿವೆ. ವಿವಿಧ ಬಗೆಯ ತಾತ್ವಿಕ ನೆಲೆಗಟ್ಟುಗಳಿಗೆ ಕವಿತೆಗಳು ಮುಖಾಮುಖಿಯಾಗಿವೆ’ ಎಂದು ವಿಶ್ಲೇಷಿಸಿದರು.</p>.<p>ಲೇಖಕ ತಿರುಮಲ ಮಾವಿನಕುಳಿ ಮಾತನಾಡಿದರು. ಸುಶೀಲ ವೆಂಕಟೇಶ್, ಜಿ.ಎಸ್. ವೆಂಕಟೇಶ್ ಹಾಜರಿದ್ದರು. ರಾಜೇಂದ್ರ ಪ್ರಸಾದ್ ಕವಿತೆಗಳನ್ನು ವಾಚಿಸಿದರು.</p>.<p>ವಿದುಷಿ ವಸುಧಾ ಶರ್ಮ, ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡಿದರು. ವಿದ್ವಾನ್ ನರಸಿಂಹಮೂರ್ತಿ ತಬಲಾ ಸಾಥ್ ನೀಡಿದರು. ರಕ್ಷಾ, ಸುಪ್ರಿತಾ, ಅಂಶುಮತಿ ನೃತ್ಯ ಪ್ರದರ್ಶಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-42-293991593</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಗರ: ‘ನಿವೃತ್ತ ಯೋಧ ಜಿ.ಎಸ್. ವೆಂಕಟೇಶ್ ರಚಿಸಿರುವ ‘ಪಾಂಚಜನ್ಯ’ ಕವನ ಸಂಕಲನದಲ್ಲಿನ ಕವಿತೆಗಳು ವಾಸ್ತವಿಕ ನೆಲೆಗಟ್ಟಿನಿಂದ ಕಸುವು ಹೆಚ್ಚಿಸಿಕೊಂಡಿವೆ’ ಎಂದು ಶಿಕ್ಷಣ ಸಂಯೋಜಕ ಶಂಕರ ಶಾಸ್ತ್ರಿ ಹೇಳಿದರು.</p>.<p>ಇಲ್ಲಿನ ಪ್ರಗತಿ ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ಪಾಂಚಜನ್ಯ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.</p>.<p>‘ವೆಂಕಟೇಶ್ ಅವರ ಜೀವನಾನುಭವದ ಪ್ರತಿಬಿಂಬಗಳು ಕವಿತೆಗಳಲ್ಲಿ ದಟ್ಟವಾಗಿ ಅಭಿವ್ಯಕ್ತಗೊಂಡಿವೆ. ವಿವಿಧ ಬಗೆಯ ತಾತ್ವಿಕ ನೆಲೆಗಟ್ಟುಗಳಿಗೆ ಕವಿತೆಗಳು ಮುಖಾಮುಖಿಯಾಗಿವೆ’ ಎಂದು ವಿಶ್ಲೇಷಿಸಿದರು.</p>.<p>ಲೇಖಕ ತಿರುಮಲ ಮಾವಿನಕುಳಿ ಮಾತನಾಡಿದರು. ಸುಶೀಲ ವೆಂಕಟೇಶ್, ಜಿ.ಎಸ್. ವೆಂಕಟೇಶ್ ಹಾಜರಿದ್ದರು. ರಾಜೇಂದ್ರ ಪ್ರಸಾದ್ ಕವಿತೆಗಳನ್ನು ವಾಚಿಸಿದರು.</p>.<p>ವಿದುಷಿ ವಸುಧಾ ಶರ್ಮ, ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡಿದರು. ವಿದ್ವಾನ್ ನರಸಿಂಹಮೂರ್ತಿ ತಬಲಾ ಸಾಥ್ ನೀಡಿದರು. ರಕ್ಷಾ, ಸುಪ್ರಿತಾ, ಅಂಶುಮತಿ ನೃತ್ಯ ಪ್ರದರ್ಶಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-42-293991593</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>