ಶ್ರೀನಗರ: ಇಲ್ಲಿನ ಕೇಂದ್ರೀಯ ಕಾರಾಗೃಹದಲ್ಲಿ ಶೋಧ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), 25 ಮೊಬೈಲ್ ಫೋನ್ಗಳು, ಜಿಹಾದಿ ಸಾಹಿತ್ಯ, ಪಾಕಿಸ್ತಾನದ ಧ್ವಜ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಎನ್ಎಸ್ಜಿ ಕಮಾಂಡೊಗಳ ಜೊತೆ, ಎನ್ಐಎಯ 20 ತಂಡಗಳು ಜೈಲಿನಲ್ಲಿ ಶೋಧ ಕಾರ್ಯ ನಡೆಸಿವೆ. ಭಯೋತ್ಪಾದಕರು ಸೇರಿದಂತೆ ಪಾಕಿಸ್ತಾನದ ಕೈದಿಗಳಿರುವ ಅತ್ಯಂತ ಸುರಕ್ಷಿತ ಕೊಠಡಿಗಳಲ್ಲೂ ಶೋಧ ನಡೆಸಲಾಗಿದೆ.
‘ಅಲ್ ಬದರ್ ಉಗ್ರ ಸಂಘಟನೆಗೆ ಯುವಕರನ್ನು ನೇಮಕ ಮಾಡಲು ಜೈಲಿನೊಳಗೆ ಸಂಚು ರೂಪಿಸಲಾಗಿತ್ತು ಎಂದು ಈಚೆಗೆ ಪೊಲೀಸರಿಗೆ ಸೆರೆ ಸಿಕ್ಕಿದ್ದ ಇಬ್ಬರು ಯುವಕರು ಹೇಳಿಕೆ ನೀಡಿದ್ದರು. ಈ ಕಾರಣಕ್ಕೆ ಶೋಧ ಕಾರ್ಯ ನಡೆಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.