ಸಹಕಾರದ ಭರವಸೆ: ರೋಹಿಂಗ್ಯಾ ಮುಸ್ಲಿಮರು ಇದ್ದ ರಾಖೈನ್ ರಾಜ್ಯದ ಅಭಿವೃದ್ಧಿ, ನಿರಾಶ್ರಿತರ ವಾಪಸಾತಿ, ಮ್ಯಾನ್ಮಾರ್ಗೆ ಸಹಕಾರ ನೀಡಿಕೆ, ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. 2016ರಲ್ಲಿ ಹಿಂಸಾಚಾರದ ಕಾರಣ ಸುಮಾರು ಏಳು ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು. ರೋಹಿಂಗ್ಯಾ ಸಮುದಾಯದ ಜನರ ಪುನರ್ವಸತಿ, ಸುರಕ್ಷಿತ ವಾಪಸಾತಿ ಹಾಗೂ ರಾಜ್ಯದ ಅಭಿವೃದ್ಧಿಗೆ ಭಾರತ ಸಹಕಾರ ನೀಡುತ್ತದೆ ಎಂದು ಸುಷ್ಮಾ ಮನವರಿಕೆ ಮಾಡಿಕೊಟ್ಟರು.