ಯಕ್ಷಗಾನದಲ್ಲಿ ‘ಶತಕ ಧ್ವಜ’ ಎಂಬ ಬಿರುದು ಪಡೆದಿರುವ ಕುಡ್ಲದ ಶರತ್ ಕುಮಾರ್ ಕದ್ರಿ ಅವರಿಗೆ ಯಕ್ಷಗಾನದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಆಸಕ್ತಿ. ದ್ರೋಣ ಪಾತ್ರಧಾರಿಯಾಗಿ ಯಕ್ಷಲೋಕ ಪ್ರವೇಶಿಸಿದ ಇವರು ಹಿಂತಿರುಗಿ ನೋಡಲೇ ಇಲ್ಲ. ರಾಜವೇಷಧಾರಿಯಾಗಿ ಅರ್ಜುನ, ದೇವೇಂದ್ರ, ಪಂಚಜನ್ಯ, ವಾತಾಪಿ-ಇಲ್ವಲ, ಮುರಾಸುರ... ಹೀಗೆ ಹಲವಾರು ಪಾತ್ರ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.