ನಿರುದ್ಯೋಗಿಯಾಗಿರುವುದಕ್ಕಿಂತ ಪಕೋಡಾ ಮಾರುವುದೇ ಲೇಸು ಎಂದು ಹೇಳಿರುವ ಅಮಿತ್ ಶಾ, ‘ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರು ಪಕೋಡಾ ಮಾರಾಟ ಮಾಡುವುದನ್ನು ಭಿಕ್ಷೆ ಬೇಡುವುದರ ಜತೆ ಹೋಲಿಸಿದ್ದಾರೆ. ಪಕೋಡಾ ಮಾರಾಟ ಮಾಡುವವರು ಸ್ವ ಉದ್ಯೋಗಿಗಳು. ಅವರನ್ನು ನೀವು ಭಿಕ್ಷುಕರ ಜತೆ ಹೋಲಿಸಬಹುದೇ’ ಎಂದು ಪ್ರಶ್ನಿಸಿದರು. ಅಲ್ಲದೆ, ಚಹಾ ಮಾರುವವನ ಮಗ ದೇಶದ ಪ್ರಧಾನಿಯಾಗಿದ್ದಾರೆ ಎಂಬುದನ್ನು ಉಲ್ಲೇಖಿಸಿದರು.