ಕ್ರಿ.ಶ. 1628 ರಲ್ಲಿ ಇಮ್ಮಡಿ ಕೆಂಪೇಗೌಡ, ತಳಾರಿ ಗಂಗಪ್ಪ ನಾಯಕನನ್ನು ಬಂಧಿಸಿ, ಕೋಟೆಯನ್ನು ವಶಪಡಿಸಿಕೊಂಡ. ನಂತರ ಮಣ್ಣಿನ ಕೋಟೆಯ ಹೊರಮೈಗೆ ಕಲ್ಲನ್ನು ಕಟ್ಟಿಸಿದ್ದರು. ಕೋಟೆ ಶಿಥಿಲವಾಗಿದ್ದ ಕಾರಣ, ಕೆಂಪೇಗೌಡ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಇತಿಹಾಸ ಸಂಶೋಧಕ ಡಾ. ಮುನಿರಾಜಪ್ಪ, ಎಚ್.ಎಂ. ಕೃಷ್ಣಮೂರ್ತಿ ತಂಡದವವರು ಕೋಟೆ ದುರಸ್ತಿಗೆ ಆಗ್ರಹಿಸಿ ಹೋರಾಟ ನಡೆಸಿದ್ದರು. ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೋಟೆ ದುರಸ್ತಿಗೆ ಬಹುಕೋಟಿ ಅನುದಾನ ನೀಡಿದ್ದರು. ಹಂಪೆ ಮತ್ತು ಮೈಸೂರಿನ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ಅಧಿಕಾರಿಗಳು ದುರಸ್ತಿಗೆ ಮುಂದಾದರು. ಆಗ್ನೇಯ ದಿಕ್ಕಿನ ಬತೇರಿಯನ್ನು ಕಟ್ಟಿ ಮುಗಿಸಿದ್ದರು. ಒಂದು ತಿಂಗಳ ಒಳಗೆ ಬತೇರಿಯಲ್ಲಿ ಬಿರುಕು ಬಿಟ್ಟಿತು ಎಂದರು.