‘ಮಾರುಕಟ್ಟೆಯಲ್ಲಿ ಪರಿಸರಸ್ನೇಹಿ ಹಣತೆಗಳಿಗೆ ಬೇಡಿಕೆಯಿದ್ದು, ತಮಿಳುನಾಡಿನ ಅಚ್ಚು ಹಾಕಿದ ಆಲಂಕಾರಿಕ ವೈವಿಧ್ಯಮಯ ಹಣತೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ಪ್ರತಿದಿನ 800 ದೀಪಗಳನ್ನು ಸಿದ್ಧಪಡಿಸುತ್ತೇನೆ. ನಿತ್ಯ 5–6 ಜನ ಗ್ರಾಹಕರು ಬರುತ್ತಿದ್ದು, ವಾರಾಂತ್ಯದಲ್ಲಿ ವಹಿವಾಟು ಹೆಚ್ಚಾಗಬಹುದು. ಕೋವಿಡ್ ಕಾರಣದಿಂದ ಮಂಕಾಗಿದ್ದ ಮಾರುಕಟ್ಟೆಗೆ ಈಗ ಗ್ರಾಹಕರು ಉತ್ಸಾಹದಿಂದ ಬರುತ್ತಿದ್ದಾರೆ’ ಎಂದು ಪಾಟರಿಟೌನ್ನ ಕುಂಬಾರ ರಮೇಶ್ ಮಾಹಿತಿ ನೀಡಿದರು.