ಈಗಲೂ ನನ್ನಪ್ಪ ಐದು ಗಂಟೆ ನಾಟಕ ವೀಕ್ಷಿಸಿ, ವಿಮರ್ಶೆ ಬರೆಯುತ್ತಾರೆ. ಮಾತನಾಡುತ್ತಾರೆ. ಈಚೆಗೆ ಒಂದು ಪುಸ್ತಕವನ್ನೂ ಬರೆದಿದ್ದಾರೆ. ಯಾರಾದರೂ ಓದಬೇಕು, ಮೆಚ್ಚಬೇಕು ಎಂಬ ನಿರೀಕ್ಷೆ ಅವರಿಗಿಲ್ಲ. ಪತ್ರಿಕೆಗಳಿಗೂ ಆಗಾಗ ಲೇಖನ ಬರೆಯುತ್ತಲೇ ಇರುತ್ತಾರೆ. ಜಾತಿ, ಧರ್ಮಗಳನ್ನು ಮೀರಿದವರು. ನಮಗೂ ಅದನ್ನೇ ಹೇಳಿಕೊಟ್ಟವರು. ನಾವುಯಾರನ್ನಾದರೂ ಮನೆಗೆ ಕರೆದುಕೊಂಡು ಹೋದರೂ ಮೊದಲು ಅವರಿಗೆ ಊಟ ಬಡಿಸು ಎನ್ನುತ್ತಾರೆ.