ವೆಂಕಟಭಟ್ಟ ಎಂಬುದು ಇವರ ಮೊದಲಿನ ಹೆಸರು; ಕುಂಭಕೋಣದವರು.(ವೆಂಕಟನಾಥ, ವೆಂಕಣ್ಣಭಟ್ಟ – ಎಂದೂ ಹೇಳುವುದುಂಟು.) ಅವರ ತಂದೆಯ ಹೆಸರು ತಿಮ್ಮಣ್ಣಭಟ್ಟ. ತಾಯಿಯ ಹೆಸರು ಗೋಪಿಕಾಂಬ. ತಿಮ್ಮಣ್ಣಭಟ್ಟರ ತಾತನವರಿಗೂ ವಿಜಯನಗರ ಸಂಸ್ಥಾನಕ್ಕೂ ನಂಟಿತ್ತು. ಎಳವೆಯಿಂದಲೇ ಅಪಾರ ವಿದ್ವತ್ತನ್ನು ಸಂಪಾದಿಸಿದವರು ವೆಂಕಟಭಟ್ಟ. ಅವರ ಜ್ಞಾನನಿಷ್ಠೆಯನ್ನೂ ವೈರಾಗ್ಯವನ್ನೂ ಕಂಡು ಗುರುಗಳಾದ ಸುಧೀಂದ್ರತೀರ್ಥರು ಅವರಿಗೆ ‘ರಾಘವೇಂಧ್ರತೀರ್ಥ’ ಎಂಬ ಹೆಸರನ್ನು ನೀಡಿ, ಸನ್ಯಾಸದೀಕ್ಷೆಯನ್ನು ಕೊಟ್ಟರು. ಪ್ರಹ್ಲಾದನ ಮೂರನೇ ಅವತಾರವೇ ರಾಘವೇಂದ್ರಸ್ವಾಮಿಗಳು ಎಂಬ ನಂಬಿಕೆ ಅವರ ಭಕ್ತರದ್ದು.