ಸುದೀರ್ಘ ಕಾಲ ಚಿಕಿತ್ಸೆಗೆ ಒಡ್ಡಿಕೊಂಡಿದ್ಡರಿಂದ ಅವರು ಮಧುಮೇಹದಿಂದಲೂ ಬಳಲ ಬೇಕಾಯಿತು. ಆಸ್ತಮಾ ಕೂಡಾ ಆಗಾಗ ಬಾಧಿಸುತ್ತಿತ್ತು. ಅನಾರೋಗ್ಯ ಲೆಕ್ಕಿಸದೇ ಕೋವಿಡ್ ನಂತಹ ಇಕ್ಕಟ್ಟಿನ ಸಂದರ್ಭದಲ್ಲೂ ಕರ್ತವ್ಯಕ್ಕೆ ಚ್ಯುತಿ ಆಗದಂತೆ ನೋಡಿಕೊಂಡರು. ಕಾಯಿಲೆ ಜೊತೆಗಿನ ಹೋರಾಟ, ಕರ್ತವ್ಯದ ಜಂಜಡಗಳ ನಡುವೆಯೂ ಒಬ್ಬಳೇ ಮಗಳಿಗೆ ಎಂಜಿನಿಯರಿಂಗ್ ಶಿಕ್ಷಣ ಕೊಡಿಸಿದ್ದಾರೆ. ನಗರದ ದಾಸಪ್ಪ ಆಸ್ಪತ್ರೆ ಪ್ರಾಂಗಣದಲ್ಲಿರುವ ಬಿಬಿಎಂಪಿ ಆರೋಗ್ಯ ವಿಭಾಗದ ಕಚೇರಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.