ಹೀಗಾಗಿ ಅವರು ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಜಮೀರ್ ಪಾಷಾರ ನಾಮಪತ್ರ ವಾಪಸ್ ತೆಗೆಸಿ ಪಕ್ಷದಿಂದ ತಮ್ಮನ್ನು ಬೆಂಬಲಿಸಬೇಕೆಂದು ಪಟ್ಟು ಹಿಡಿದಿದ್ದರು. ಮುನಿಯಪ್ಪ, ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲದ ಕಾರಣ ಪಕ್ಷದಿಂದ ತಮ್ಮ ಮಗಳನ್ನು ಬೆಂಬಲಿಸಬೇಕೆಂದು ದಾಳ ಉರುಳಿಸಿದ್ದರು.