ದಲಿತ ಸಾಹಿತ್ಯದ ಅನುವಾದದ ಮೂಲಕ ಹೆಸರಾಗಿರುವ ವಸಂತ ಸೂರ್ಯ, ಕೆಲವು ಪ್ರಮುಖ ಬರಹಗಳು, ಕಾವ್ಯಗಳ ಉದಾಹರಣೆ ನೀಡುತ್ತಾ ಮಾತನಾಡಿದರು. ಕಳೆದ ವರ್ಷ ದೆಹಲಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯ ವಿಷಯದಿಂದ ಕೈಬಿಟ್ಟ ದಲಿತ ಬರಹವೊಂದರ ಸಾರಾಂಶವೊಂದನ್ನು ನೆನಪಿಸಿಕೊಂಡರು. 1968ರಲ್ಲಿ 23 ಮಕ್ಕಳನ್ನೂ ಸೇರಿದಂತೆ 56 ಮಂದಿಯನ್ನು ಗುಡಿಸಲಿನಲ್ಲಿ ಬಂಧಿಸಿ ಕೊಳ್ಳಿಇಟ್ಟ ಪ್ರಸಂಗವೊಂದು ದಲಿತ ಸಾಹಿತ್ಯದ ಭಾಗವಾಗಿರುವುದನ್ನು ಭಾವುಕರಾಗಿ ವಿವರಿಸಿದರು.