ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್ಡಿಒ) ಸಾರ್ವಜನಿಕ ಸಂಪರ್ಕಾಧಿಕಾರಿ ಆಗಿದ್ದ
ಜಯಪ್ರಕಾಶ ಪುತ್ತೂರು ಅವರು, ತಮ್ಮ ವೃತ್ತಿ ಅನುಭವಗಳನ್ನು ದಾಖಲಿಸಿದ ಕೃತಿ ‘ಹಮಾರಾ ಪಿಆರ್ಒ’. ಸದಾ ಹುಳುಕುಗಳನ್ನು ಹುಡುಕಲು ಹಾತೊರೆಯುವ ಮಾಧ್ಯಮ, ಸಂಸ್ಥೆಯ ಕುರಿತು ಒಂದೇ ಒಂದು ನಕಾರಾತ್ಮಕ ಸುದ್ದಿ ಪ್ರಕಟವಾಗುವುದನ್ನೂ ಸಹಿಸದ ಆಡಳಿತ ಮಧ್ಯೆ ನಾಜೂಕಿನಿಂದ ಕೆಲಸ ಮಾಡಬೇಕಾಗಿದ್ದ ಲೇಖಕರ ಅನುಭವಗಳು ರಸವತ್ತಾಗಿವೆ.