ಪ್ರಗತಿಪರ ವಿಚಾರಧಾರೆಯ ದಾರಿಯಲ್ಲಿ ಅಲ್ಲಮಪ್ರಭು ಅವರ ಹೋರಾಟ ಗೋಕಾಕ ಚಳವಳಿಯಿಂದ ಹಿಡಿದು ಕಪ್ಪತಗುಡ್ಡ ಹೋರಾಟದವರೆಗೂ ಇದೆ. ಈ ಹೋರಾಟದ ಹೆಜ್ಜೆಗಳನ್ನು ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಸಿ.ಬಿ.ಚಿಲ್ಕರಾಗಿ ಕಟ್ಟಿಕೊಟ್ಟಿದ್ದಾರೆ. ‘ಸಾಂಪ್ರದಾಯಿಕ ಚೌಕಟ್ಟನ್ನು ಬಿಟ್ಟು, ಕವಿಯ ಸಾಹಿತ್ಯ ಸೃಷ್ಟಿಯ ಮೂಲಕವೇ ಅವರನ್ನು ಶೋಧಿಸುವುದು ಈ ಕೃತಿಯ ವೈಶಿಷ್ಟ್ಯ’ ಎಂದು ಹೇಳಿದ್ದಾರೆ ಕೃತಿಗೆ ಮುನ್ನುಡಿ ಬರೆದಿರುವ ದಿವಂಗತ
ಪ್ರೊ.ಚಂದ್ರಶೇಖರ ಪಾಟೀಲ. ಕೃತಿಯಲ್ಲಿ ಬಳಸಿದ ಭಾಷೆಯೂ ಕಾವ್ಯಮಯವಾಗಿದೆ. ‘ಅನಂತ’, ‘ಹಿಂದಣ ಬೆಳಗು’, ‘ಕೊಪ್ಪಳದ ಪರಿಸರ’, ‘ಹೋರಾಟ’, ‘ವೈಚಾರಿಕತೆ’ ಹೀಗೆ ಒಂಬತ್ತು ಅಧ್ಯಾಯಗಳಲ್ಲಿ ಬೆಟ್ಟದೂರರ ವ್ಯಕ್ತಿತ್ವ, ಜೀವನಕಥನವಿದೆ. ಛಾಯಾಚಿತ್ರಗಳೂ ಬೆಟ್ಟದೂರರ ಬದುಕನ್ನು ಚಿತ್ರಸಿವೆ.