‘ಪ್ರಮುಖ ಬೇಡಿಕೆಗಳಾದ ಸಾರ್ವತ್ರಿಕ ವಿಮೆ, ವೈದ್ಯಕೀಯ ಭತ್ಯೆ ಜಾರಿಯಾಗಿದೆ. ಬಡ್ತಿ ಶಿಕ್ಷಕರ ಸಮಸ್ಯೆಗೆ ಜ.3ರಂದು ಶಿಕ್ಷಣ ಸಚಿವರು ಬಡ್ತಿ ಆದೇಶ ಮಾಡಿದ್ದಾರೆ. ಆದರೆ, ಇನ್ನೂ ಜಾರಿಯಾಗಿಲ್ಲ. ಪದವಿಪೂರ್ವ ಕಾಲೇಜಾಗಿ ಬೇರ್ಪಟ್ಟಲ್ಲಿ, 750 ವಿದ್ಯಾರ್ಥಿಗಳ ಹಾಜರಾತಿ ಹೊಂದಿದ ಕಾಲೇಜಿಗೆ ಒಬ್ಬ ಮುಖ್ಯೋಪಾಧ್ಯಾಯ, ಸಹಪ್ರಾಚಾರ್ಯರು ಇರಬೇಕು ಎನ್ನುವ ನಿಯಮವಿದೆ. ಆದರೆ, 12 ಹುದ್ದೆಗಳು ಖಾಲಿ ಇವೆ’ ಎಂದು ದೂರಿದರು.