ಹಾಸ್ಯ ಒಂದು ಕಲೆ. ಹಾಸ್ಯಕ್ಕೆ ಸೋಲದವರಿಲ್ಲ, ತಲೆ ಬಾಗದವರಿಲ್ಲ, ನಕ್ಕು ಹೊಟ್ಟೆ ಹುಣ್ಣು ಮಾಡಿಕೊಳ್ಳದವರಿಲ್ಲ. ಕನ್ನಡ ಹಾಸ್ಯಲೋಕದಲ್ಲಿ ಛಾಪು ಮೂಡಿಸಿದ ಪ್ರಮುಖರಲ್ಲಿನಾಗರಾಜು ಕೋಟೆ ಕೂಡ ಒಬ್ಬರು. ಹಾಸ್ಯ ಕಲಾವಿದರಾಗಿ ‘ಬಾನಾಡಿ’ ಚಿತ್ರ ನಿರ್ದೇಶಿಸಿ ರಾಜ್ಯ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡಿದ್ದಾರೆ. ತಮ್ಮ ವಿನೋದ ಬರಹಗಳ ಸಂಗ್ರಹ ಒಟ್ಟುಗೂಡಿಸಿ ‘ಕಾಮಿಡಿ ಕಗ್ಗ’ ಪುಸ್ತಕ ಹೊರತಂದಿದ್ದಾರೆ.