ಈ ಕೃತಿಯಲ್ಲಿ 44 ಅಧ್ಯಾಯಗಳಿವೆ. ಎಂಬತ್ತರ ದಶಕದ ದಾವಣಗೆರೆಯ ಕಾರ್ಮಿಕ ಚಳವಳಿ, ಕಮ್ಯೂನಿಸ್ಟ್ ರಾಜಕೀಯ, ತೊಂಬತ್ತರ ದಶಕದ ಆರಂಭದಲ್ಲಿ ‘ರಾಮಮಂದಿರ –ರಾಮಜ್ಯೋತಿ’ ಹೆಸರಿನಲ್ಲಿ ನಡೆದ ಕೋಮುವಾದ, ಜಾತಿವಾದವನ್ನು ಕೃತಿಯಲ್ಲಿ ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.ರಾಮಜ್ಯೋತಿ’ ಹೆಸರಿನಲ್ಲಿ ದಾವಣಗೆರೆಯಲ್ಲಿ ನಡೆದ ಕೋಮು ಗಲಭೆಯ ನಂತರ ತಮ್ಮ ಬದುಕಿನಲ್ಲಿ ಉಂಟಾದ ಬದಲಾವಣೆಯನ್ನೂ ಅತ್ಯಂತ ನೋವಿನ ಧ್ವನಿಯಲ್ಲೇ ದಾಖಲಿಸಿದ್ದಾರೆ. ಸ್ವವಿಮರ್ಶೆ ಮತ್ತು ವಿಮರ್ಶೆಯ ಚಕ್ರದ ಮೇಲೆ ಈ ಆತ್ಮಕಥನ ಸಾಗಿದೆ. ಓದುವಾಗ ಈ ಕಥನದಲ್ಲಿನಾವೂ ಭಾಗಿದಾರರು ಎಂದೆನಿಸದೆ ಇರದು.