ಲೇಖಕರು ನ್ಯಾಯಮೂರ್ತಿಯಾಗಿದ್ದಾಗಲೂ, ನಿವೃತ್ತರಾದ ಮೇಲೂ ಸಾಮಾಜಿಕ ನ್ಯಾಯ, ನೀತಿ ನಿಯಮಗಳ ಬಗ್ಗೆ ಸ್ಪಷ್ಟ ನಿಲುವನ್ನು ಪ್ರತಿಪಾದಿಸಿದವರು. ಅವರ ವೃತ್ತಿಬದುಕಿನ ಅನುಭವ, ಅಧ್ಯಯನ ಮತ್ತು ಪ್ರಚಲಿತ ಸನ್ನಿವೇಶಗಳಿಗೆ ಪ್ರತಿಸ್ಪಂದನದ ರೂಪವಾಗಿ ಕೃತಿ ಮೈದಾಳಿದೆ. 22 ಚಿಕ್ಕಚಿಕ್ಕ ಅಧ್ಯಾಯಗಳಲ್ಲಿ ವಿಸ್ತಾರವಾದ ವಿಷಯ ವಿವರಣೆ ಇದೆ. ಸಂವಿಧಾನ, ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಸಾಮಾಜಿಕ ಹೋರಾಟಗಾರರಿಗೆ ಮಾರ್ಗದರ್ಶಿ ಆಗಬಲ್ಲ ಕೃತಿಯಿದು.