ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ತಂತ್ರಜ್ಞಾನ ಕಥನಗಳ ಸಂಕಲನ

Last Updated 26 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ವಿಜ್ಞಾನ ವಿಷಯಗಳ ಕುರಿತು ಬರವಣಿಗೆ ಅಷ್ಟು ಸುಲಭವಲ್ಲ. ಕಬ್ಬಿಣದ ಕಡಲೆಯಂಥ ವಿಷಯವನ್ನು ಸಾಮಾನ್ಯ ಓದುಗರಿಗೂ ಅರ್ಥವಾಗುವಂತೆ ಸರಳವಾಗಿ ಹೇಳಿ ರುಚಿ ಹತ್ತಿಸುವುದು ಅಲ್ಲಿನ ಕಷ್ಟ. ಆದರೆ, ವೃತ್ತಿಯಲ್ಲಿ ಗಣಿತ ಅಧ್ಯಾಪಕರಾಗಿರುವ ಗುರುರಾಜ್‌ ಎಸ್‌. ದಾವಣಗೆರೆ ಅವರು ವಿಜ್ಞಾನದಬರವಣಿಗೆಯನ್ನೂ ರುಚಿಸುವಂತೆ ರಸಪಾಕ ಮಾಡಿಕೊಡುವುದರಲ್ಲಿ ಸಿದ್ಧಹಸ್ತರು. ‘ಸುಧಾ’ ವಾರಪತ್ರಿಕೆಯಲ್ಲಿ ವಿಜ್ಞಾನ ವಿಷಯಗಳ ಕುರಿತು ಅವರು ಬರೆದ ಲೇಖನಗಳ ಸಂಗ್ರಹವೇ ‘ಡೇಟಾ ದೇವರು ಬಂದಾಯ್ತು’.

ಈ ಶತಮಾನದಲ್ಲಿ ಇಡೀ ವಿಶ್ವವನ್ನೇ ಆಳುತ್ತಿರುವ ನವನವೀನ ತಂತ್ರಜ್ಞಾನ ಇಲ್ಲಿನ ಲೇಖನಗಳ ಮೂಲ ವಿಷಯ. ಹೊಸ ತಂತ್ರಜ್ಞಾನಗಳು, ವಿಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗಳು ಸಾಮಾನ್ಯರಿಗೂ ಕುತೂಹಲ ಹೆಚ್ಚಿಸುವ ಸಂಗತಿಗಳು. ಕೃತಕ ಬುದ್ಧಿಮತ್ತೆ ಮತ್ತು ಅದರಪ್ರಯೋಜನದ ಬಗ್ಗೆ ಕಿಂಚಿತ್ತು ಮಾಹಿತಿಯನ್ನಾದರೂ ತಿಳಿಯಲು ಜನ ಬಯಸುತ್ತಾರೆ. ಇಂತಹ ವಿಷಯಗಳನ್ನು ‘ಡೇಟಾ ದೇವರು ಮತ್ತು ಅಲ್ಗೊರಿಧರ್ಮ’, ‘ಮುಂದಿದೆ ಅತಿಮಾನವರ ಕಾಲ’, ‘ನಾನವನಲ್ಲ ಮಾನವನಲ್ಲ’ ಮುಂತಾದ ಲೇಖನಗಳಲ್ಲಿ ಲೇಖಕರು ಪ್ರಸ್ತುತಪಡಿಸಿದ್ದಾರೆ. ವಿಷಯಕ್ಕೆ ತಕ್ಕ ಚಿತ್ರಗಳೂ ಓದಿಗೆ ಪೂರಕವಾಗಿವೆ.

ಮದುವೆ ಮನೆಗಳಿಂದ ಹಿಡಿದು ರಕ್ಷಣೆ, ಕೃಷಿ ಕ್ಷೇತ್ರದಲ್ಲೂ ಬಳಕೆಯಾಗುತ್ತಿರುವ ಡ್ರೋನ್‌ಗಳ ಬಗ್ಗೆಯೂ ಇಲ್ಲಿ ಭರಪೂರ ಮಾಹಿತಿ ಇದೆ. ಪ್ಲಾಸ್ಟಿಕ್‌ ಫ್ಯಾಕ್ಟ್‌ಶೀಟ್‌ನಲ್ಲಿನ ಆಘಾತಕಾರಿ ಅಂಶಗಳು ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮವನ್ನು ವಿವರಿಸುತ್ತವೆ. ಮೃತದೇಹವನ್ನು ಮಣ್ಣು ಮಾಡುವ ವಿಧಾನಕ್ಕೂ ಕಾಲಿಟ್ಟ ತಂತ್ರಜ್ಞಾನದ ಕುರಿತ ‘ಬರಲಿದೆ ಸಾವಯವ ಶವಸಂಸ್ಕಾರ’ ಲೇಖನ, ‘ನೀನಾರಿಗಾದೆಯೋ ಎಲೆ ಮಾನವ’ ಎಂಬ ಪ್ರಶ್ನೆಗೆ ಉತ್ತರದಂತಿದೆ. ಈ ಕೃತಿ ವಿಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತ ಮಾಹಿತಿಯ ಕೋಶವಾಗಿದೆ.

ಕೃತಿ: ಡೇಟಾ ದೇವರು ಬಂದಾಯ್ತು!

ಲೇ: ಗುರುರಾಜ್‌ ಎಸ್‌. ದಾವಣಗೆರೆ

ಪ್ರ: ಭೂಮಿ ಬುಕ್ಸ್‌, ಬೆಂಗಳೂರು

ಸಂ: 9449177628

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT