ಇದು ನೀರಜ್ ವಾಘೋಲಿಕರ್ ಅವರು ಇಂಗ್ಲಿಷ್ನಲ್ಲಿ ಬರೆದ ‘ಸೇವಿಂಗ್ ದಿ ದಲೈ ಲಾಮಾಸ್ ಕ್ರೇನ್ಸ್’ ಎನ್ನುವ ಪುಸ್ತಕದ ಕನ್ನಡ ಅನುವಾದ. ಇದನ್ನು ಕನ್ನಡಕ್ಕೆ ತಂದವರು ಲೇಖಕ ನಾಗೇಶ ಹೆಗಡೆ. ಅರುಣಾಚಲ ಪ್ರದೇಶದಲ್ಲಿ ಒಂದು ಅಣೆಕಟ್ಟು ನಿರ್ಮಾಣ ಆಗುವುದರಿಂದ ನಿರ್ದಿಷ್ಟ ಪ್ರದೇಶದ ಜೀವವೈವಿಧ್ಯಕ್ಕೆ ಧಕ್ಕೆ ಆಗುತ್ತದೆ ಎನ್ನುವ ಒಂದು ವರದಿ ಇದ್ದರೂ, ಅದನ್ನು ಸಾರ್ವಜನಿಕರಿಂದ ಮುಚ್ಚಿಟ್ಟು, ಇನ್ನೊಂದು ಖೊಟ್ಟಿ ವರದಿ ಸಿದ್ಧಪಡಿಸಿ, ಆ ವರದಿಯ ಆಧಾರದಲ್ಲಿ ಅಣೆಕಟ್ಟೆ ನಿರ್ಮಾಣಕ್ಕೆ ಮುಂದಡಿ ಇರಿಸಲಾಗುತ್ತದೆ. ಈ ವಿಚಾರವನ್ನು ತಿಳಿದ ಪೆಮಾ, ತೆಂಜಿನ್ ಮತ್ತು ತಾರಾ ಎನ್ನುವ ಮೂವರು ಸಾಹಸಿಗರು ಅಣೆಕಟ್ಟೆ ನಿರ್ಮಾಣದ ವಿರುದ್ಧ ಜನಾಭಿಪ್ರಾಯ ರೂಪಿಸುವ ಕಥೆ ಇದು.