ಕಾರ್ಮಿಕ ವರ್ಗದ, ಬಡವರ ಜೀವನವನ್ನು ಹತ್ತಿರದಿಂದ ಕಾಣಲು, ಅನುಭವಿಸಲು ಇದ್ದ ಕೆಲಸ ಬಿಟ್ಟು, ಗಣಿ, ಹೋಟೆಲ್, ಆಸ್ಪತ್ರೆ, ಸೇನೆ, ಖಾಸಗಿ ಶಾಲೆ, ಪುಸ್ತಕದ ಅಂಗಡಿಗಳಲ್ಲಿ ಕೆಲಸ ಮಾಡಿ ಬದುಕು ಸಾಗಿಸುತ್ತಾ, ಬದುಕಿನ ಬಗ್ಗೆ ವಿಶಿಷ್ಟ ದೃಷ್ಟಿಕೋನ ರೂಪಿಸಿಕೊಂಡರು. ಬಿಬಿಸಿ, ಟ್ರಿಬ್ಯೂನ್ ಮಾಧ್ಯಮ ಸಂಸ್ಥೆಗಳಲ್ಲೂ ಕೆಲಸ ಮಾಡಿ, ನಿರಂತರ ಅಂಕಣ ಬರೆಯುವುದರ ಜತೆಗೆ ಕಾದಂಬರಿಗಳ ರಚನೆಯಲ್ಲೂ ತೊಡಗಿದ್ದರು.