ಶೋಧ, ಸಂಯೋಜನೆ ಮತ್ತು ಬಂಡಾಯ ಎಂಬ ಭಾಗಗಳ ಮೂಲಕ ಕೃತಿ ಸಾಗುತ್ತದೆ. ಶಬರಿಗೆ ಸಿಕ್ಕಿದ, ಸಾವಿತ್ರಿಬಾಯಿ ಅವರದು ಎಂದು ತೋರುವ ದಿನಚರಿಯ ಘಟನೆಗಳು ಮತ್ತು ಶಬರಿಯ ಶೈಕ್ಷಣಿಕ ಸಂಸ್ಥೆಯ ಘಟನಾವಳಿಗಳು ಒಂದಕ್ಕೊಂದು ಸಂವಾದಿಯಾಗಿ ಮುಂದೆ ಸಾಗುವುದು ಕೃತಿಗೆ ಕಾವ್ಯಾತ್ಮಕ ಸೊಬಗನ್ನು ತಂದುಕೊಟ್ಟಿವೆ. ಜ್ಯೋತಿಬಾ ಹಾಗೂ ಸಾವಿತ್ರಿಬಾಯಿ ದಂಪತಿಯ ಋಣ ಸಮಾಜದ ಮೇಲೆ ದೊಡ್ಡದಾಗಿದೆ. ಅದನ್ನು ತೀರಿಸುವ ಪುಟ್ಟ ಯತ್ನವಿದು ಎನ್ನುತ್ತಾರೆ ಮೂಲ ಲೇಖಕಿ ಸಂಗೀತಾ ಮುಳೆ. ಕೆಸ್ತಾರ ಮತ್ತು ವಿಕಾಸ್ ಮೌರ್ಯ ದಂಪತಿ ಈ ಕೃತಿಯನ್ನು ಅಷ್ಟೇ ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ.