ನಿಷ್ಕಳಂಕವಾಗಿ ಸೇವಾವಧಿಯನ್ನು ಪೂರೈಸಿ, ಸಾಮಾಜಿಕ ನೆಲೆಯಲ್ಲಿ ತುಳಿತಕ್ಕೆ ಒಳಗಾದವರು, ಬಡವರು ಮತ್ತು ಮಹಿಳೆಯರ ಮೇಲೆ ವಿಶೇಷ ಕಾಳಜಿ ಹೊಂದಿದ ವ್ಯಕ್ತಿತ್ವ ಈ ಕೃತಿಯಲ್ಲಿ ಅನಾವರಣಗೊಂಡಿದೆ. ವಿವಿಧ ಲೇಖಕರು, ಕವಿಗಳು ಅಭಿಮಾನಿಗಳು ರಾಮಕೃಷ್ಣ ಅವರ ಬಹುಮುಖಿ ಬದುಕಿನ ಚಿತ್ರಣವನ್ನು ಕಟ್ಟಿ ಕೊಟ್ಟಿದ್ದಾರೆ. 45 ಲೇಖನಗಳಲ್ಲಿ ಅವರ ವ್ಯಕ್ತಿತ್ವ ಚಿತ್ರಿತವಾಗಿದೆ. ಅಕ್ಷರವೊಂದನ್ನೇ ಅಕ್ಕರೆಯಿಂದ ಪ್ರೀತಿಸಿದವರು ಯಾವುದೇ ಎತ್ತರಕ್ಕೆ ಏರಬಹುದು ಎಂಬುದನ್ನು ಹೇಳಲು ಹೊರಟ ಸ್ಫೂರ್ತಿದಾಯಕ ಬರಹಗಳು ಇಲ್ಲಿವೆ.