ಕ್ರೂರ ವ್ಯವಸ್ಥೆಯ ವಿಕೃತ ಘಟನೆಗಳಿಂದ ಬಹುದೊಡ್ಡ ಮಾನ, ಪ್ರಾಣ ಹಾನಿಗಳಾಗಿವೆ. ಇಂತಹ ಕೃತ್ಯಗಳನ್ನು ಅಣಕಿಸುತ್ತಲೇ ವ್ಯವಸ್ಥೆಯ ಪ್ರಶ್ನಿಸುವ ಪ್ರಯತ್ನ ಈ ಬರಹದಲ್ಲಿದೆ. ದಲಿತರ ಮೇಲಿನ ಶೋಷಣೆ, ಜಾತಿ ನಿಂದನೆ, ಧರ್ಮಧರ್ಮಗಳನಡುವಿನ ಕಿತ್ತಾಟ, ಅತ್ಯಾಚಾರ ಇತ್ಯಾದಿ ಸಮಾಜದಲ್ಲಿನ ಈ ವ್ಯವಸ್ಥೆಯಲ್ಲಿ, ‘ಇದ್ದದ್ದನ್ನ ಇದ್ದ ಹಾಗೆ ಹೇಳಿದರೆ ಕಲ್ ತೊಗೊಂಡ್ ಹೊಡಿತಾರೆ’ ಎಂದು ವ್ಯಂಗ್ಯವಾಗಿ ಹೇಳಿದರೂ ಅದು ನೂರಕ್ಕೆ ನೂರು ಸತ್ಯ. ಬುದ್ಧ, ಬಸವ, ಗಾಂಧಿ ಯಾರಾದ್ರೂ ಆಗಿರಿ ನೀವಿಲ್ಲಿ ಗೊಂತಿಗೆ ಕಟ್ಟಿದ ಹಸುಗಳು ಎಂದು ಹೇಳುತ್ತಾ ಸ್ವಂತಿಕೆಯು ಹತ್ಯೆಯಾದ ಬಗೆಯನ್ನು ವಿವರಿಸಿದ್ದಾರೆ.