ಈ ಕೃತಿ ವೈಜ್ಞಾನಿಕ ಲೇಖನಗಳ ಸಂಗ್ರಹ. ಪತ್ರಿಕೆಗಳಿಗೆ ಬರೆದ ಲೇಖನಗಳ ಸಂಕಲನ. ಮೂಲತಃ ಭೂವಿಜ್ಞಾನ ತಜ್ಞರಾಗಿರುವ ಹೆಚ್.ಚಂದ್ರಶೇಖರ ಅವರ ಈ ಕೃತಿಯಲ್ಲಿನ ಲೇಖನಗಳು ಈ ವಿಷಯಕ್ಕೇ ಹೆಚ್ಚು ಒತ್ತು ನೀಡಿವೆ. ಮಂಡ್ಯ ಜಿಲ್ಲೆಯ ದೊಡ್ಡೇಗೌಡನ ಕೊಪ್ಪಲಿನಲ್ಲಿ 1972ರಲ್ಲಿ ಸಂಭವಿಸಿದ ಭೂಕಂಪ, ರಾಜ್ಯದಲ್ಲಿನ ಪುರಾತನ ಬಾವಿಗಳು, ಜಲಪಾತಗಳು, ಭೂಕಂಪದ ಸಂಭವ ಎಷ್ಟಿದೆ, ಖನಿಜ ಸಂಪತ್ತು, ಹಂಪಿಯ ಶಿಲೆ, ಇರ್ದೆಯ ಬಿಸಿ ನೀರಿನ ಬುಗ್ಗೆ ಮುಂತಾದ ವಿಷಯಗಳ ಕುರಿತ ಲೇಖನಗಳು ಇಲ್ಲಿವೆ. ಅಂಕಿ–ಅಂಶ, ನಕ್ಷೆಗಳು ಲೇಖನಗಳನ್ನು ಮತ್ತಷ್ಟು ಅರ್ಥೈಸಿಕೊಳ್ಳಲು ಪೂರಕವಾಗಿವೆ. ಹೀಗಾಗಿ ಇಲ್ಲಿ 50 ಲೇಖನಗಳಷ್ಟೇ ಇದ್ದರೂ, ಕೃತಿಯ ಗಾತ್ರ ಬೃಹತ್ ಆಗಿದೆ.