ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಕರ್ನಾಟಕದ ಮಾಸ್ಕೋದ ಕೆಂಪುಗಾಥೆ

Last Updated 17 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಪ್ರಸ್ತುತ ದೇವನಗರಿ, ಬೆಣ್ಣೆನಗರಿ, ವಿದ್ಯಾಕಾಶಿ ಮುಂತಾದ ಉಪನಾಮಗಳೊಂದಿಗೆ ಗುರುತಿಸಲ್ಪಡುತ್ತಿರುವ ದಾವಣಗೆರೆ, ನಾಲ್ಕು ದಶಕಗಳ ಹಿಂದೆ ಕರ್ನಾಟಕದ ಮ್ಯಾಂಚೆಸ್ಟರ್‌ ಆಗಿ ಹಾಗೂ ಶ್ರಮಿಕರ ಹೋರಾಟ, ಬಲಿದಾನದಿಂದ ಕರ್ನಾಟಕದ ಮಾಸ್ಕೋ ಆಗಿಯೂ ಗುರುತಿಸಿಕೊಂಡಿತ್ತು. ಕಾಲ ಉರುಳಿದಂತೆ ಈ ಕೆಂಪುಗಾಥೆಯನ್ನು ಮಣ್ಣು ಮರೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕಪ್ಪುನೆಲದ ಕೆಂಪುಗಾಥೆಯನ್ನು ಮತ್ತೆ ನೆನಪಿಸುವ ಕೃತಿ ಇದು.

ಬಟ್ಟೆಗಿರಣಿ, ಕಾರ್ಮಿಕ ಹೋರಾಟ ಹಾಗೂ ಅದರ ಪರಿಣಾಮ, ಹರಿದ ರಕ್ತ, ಶಾಸನಸಭೆಯಲ್ಲಿಕೆಂಬಣ್ಣ ಹೀಗೆ ದಾವಣಗೆರೆಯ ಅರ್ಧಶತಮಾನದ ಚರಿತ್ರೆಯನ್ನು ಈ ಕೃತಿ ಕಟ್ಟಿಕೊಟ್ಟಿದೆ. 1970ರ ಏ.1ರಂದು ದಾವಣಗೆರೆಯಲ್ಲಿ ನಡೆದ ಎ.ಐ.ಟಿ.ಯು.ಸಿ ನಾಯಕರಾದ ಶೇಖರಪ್ಪ, ಸುರೇಶ್‌ ಅವರ ಕೊಲೆ, ಪಂಪಾಪತಿ ಅವರ ಮೇಲೆ ನಡೆದ ಭೀಕರ ಹಲ್ಲೆಯ ಘಟನೆಗಳಿಂದ ಅಧ್ಯಾಯವು ಆರಂಭಗೊಳ್ಳುತ್ತದೆ.

ಕಾಟನ್‌ ಮಿಲ್‌ ಆರಂಭ, ಈ ಮಿಲ್‌ನ ಕಾರ್ಮಿಕರ ಸಂಘಕ್ಕೆ ನರಸಿಂಹನ್‌ ಅವರು ಅಧ್ಯಕ್ಷರಾದ ನಂತರ ನಡೆದ ಘಟನೆಗಳು, ನಗರಸಭೆಯ ಸದಸ್ಯ ಸ್ಥಾನಕ್ಕೆ ಪಂಪಾಪತಿ ಅವರ ಅವಿರೋಧ ಆಯ್ಕೆ, ಕಮ್ಯೂನಿಸ್ಟ್‌ ಪಕ್ಷದ ರಾಜಕಾರಣಕ್ಕೆ ಅಧಿಕೃತ ಪ್ರವೇಶ, ಬಡ ಕಾರ್ಮಿಕರೂ ಜನಪ್ರತಿನಿಧಿಗಳಾದ ಬಗೆ ಹೀಗೆ ಪ್ರತಿಪುಟದಲ್ಲೂ ಕೆಂಪುಗಾಥೆಯನ್ನು ಈ ಕೃತಿ ಹಿಡಿದಿಟ್ಟಿದೆ. ಕೃತಿಗೆ ಬೆನ್ನುಡಿ ಬರೆದಿರುವ ರಹಮತ್‌ ತರೀಕೆರೆ ಅವರು ಉಲ್ಲೇಖಿಸುವಂತೆ ಈ ಕೃತಿ ಓದುತ್ತಾ, ದಾವಣಗೆರೆಯ ಹೋರಾಟದ ಘಟನಾವಳಿಗಳನ್ನು ಕಣ್ಣಾರೆ ಕಂಡಿದ್ದ ಕಾದಂಬರಿಕಾರ ಬಸವರಾಜ ಕಟ್ಟೀಮನಿಯವರ ಕಾದಂಬರಿ ‘ಜ್ವಾಲಾಮುಖಿಯ ಮೇಲೆ’ ನೆನಪಾಗುತ್ತದೆ.

ಕೃತಿ: ಕಪ್ಪು ನೆಲದ ಕೆಂಪುಗಾಥೆ
ಲೇ: ಇಮ್ತಿಯಾಜ್‌ ಹುಸೇನ್‌
ಪ್ರ: ಸಹನಾ ಪ್ರಕಾಶನ, ದಾವಣಗೆರೆ
ಸಂ: 9844110454

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT