ಮಕ್ಕಳ ಸಾಹಿತ್ಯದಲ್ಲಿ ತೊಡಗಿಸಿಕೊಂಡ ಶಿಕ್ಷಕರ ಸಂಖ್ಯೆ ಬಲುದೊಡ್ಡದು. ಅದರಲ್ಲೂ ವಿಜಯಪುರ ಜಿಲ್ಲೆಯನ್ನು ಮಕ್ಕಳ ಸಾಹಿತ್ಯದ ತೊಟ್ಟಿಲು ಎಂದು ಕರೆಯುವಷ್ಟು ಆ ಭಾಗದಲ್ಲಿ ಮಕ್ಕಳ ಸಾಹಿತ್ಯದ ಲೇಖಕರಿದ್ದಾರೆ. ಅವರಲ್ಲಿ ಬಹುಪಾಲು ಶಿಕ್ಷಕರು ಎನ್ನುವುದು ವಿಶೇಷ. ಜಂಬುನಾಥ ಕಂಚ್ಯಾಣಿ ಸಹ ಮಕ್ಕಳಿಗಾಗಿ ಕಥೆ, ಶಿಶುಪ್ರಾಸ, ಕವಿತೆ, ನಾಟಕ ಬರೆಯುವುದನ್ನು ತಪಸ್ಸಿನಂತೆ ರೂಢಿಸಿಕೊಂಡು ಬಂದವರಲ್ಲಿ ಒಬ್ಬರು. ಅವರ ಇತ್ತೀಚಿನ ಸಚಿತ್ರ ಮಕ್ಕಳ ಕವಿತೆಗಳ ಕೃತಿಯೇ ‘ಅವನೆಲ್ಲಿರುವನು ಹೇಳಮ್ಮ’.