ನಿಸರ್ಗ ಸಂಪತ್ತಿಗೆ ತಾಗಿಕೊಂಡೇ ಬೆಳೆದ ಸಾಂಸ್ಕೃತಿಕ ಹಿರಿಮೆಗಳು, ಸ್ಮಾರಕಗಳು, ಉದ್ಯಮ ಕ್ಷೇತ್ರಗಳು, ಕೈಗಾರಿಕೆಗಳು, ಪ್ರಮುಖ ಸಂಸ್ಥೆಗಳ ಮೇಲೂ ಕೃತಿ ಬೆಳಕು ಚೆಲ್ಲಿದೆ. ಭೂಶಾಸ್ತ್ರದ ಅಧ್ಯಯನ ಮಾಡಿದ ಬ್ರಿಟಿಷ್ ಹಾಗೂ ಮೈಸೂರು ಸಂಸ್ಥಾನದ ಭೂ ವಿಜ್ಞಾನಿಗಳನ್ನು ವಿವರವಾಗಿ ಪರಿಚಯಿಸಲಾಗಿದೆ. ಮಾತ್ರವಲ್ಲ, ಇದೇ ವಿಷಯವನ್ನು ಸರಳ ಭಾಷೆಯಲ್ಲಿ ಕನ್ನಡಿಗರಿಗೆ ತಲುಪಿಸಿದ ಕನ್ನಡ ಲೇಖಕರ ಬಗೆಗೂ ವಿವರಗಳಿವೆ.