ಬಸವಣ್ಣನ ವ್ಯಕ್ತಿತ್ವದ ಮೋಹಕ್ಕೆ ಸಿಲುಕುವ ಬಿಜ್ಜಳನಿಗೆ ಬಸವ ಗೆಳೆಯನೋ, ವೈರಿಯೋ ಎನ್ನುವ ಸಂದಿಗ್ಧ ಸನ್ನಿವೇಶಗಳು ನಾಟಕದಲ್ಲಿವೆ. ಕಲ್ಯಾಣದ ಕ್ರಾಂತಿಯನ್ನು ಸಹಿಸದ ಅತೃಪ್ತ, ಆತ್ಮಗಳ ಸಮಾಜಕ್ಕೆ ಅಂತರ್ಜಾತಿ ಮದುವೆಯೇ ನೆಪವಾಗುತ್ತದೆ. ಅದೇ ನೆಪದಲ್ಲಿ ಜೈನ ಮತ್ತು ಬ್ರಾಹ್ಮಣ ಪಂಡಿತರು ಬಿಜ್ಜಳನ ಮೇಲೆ ವಾಗ್ದಾಳಿ ನಡೆಸುತ್ತಾರೆ. ಕಲ್ಯಾಣ ಕ್ರಾಂತಿಯಲ್ಲಿ ಬಸವಣ್ಣ, ಬಿಜ್ಜಳರ ಅಂತ್ಯವಾಗುತ್ತದೆ. ಸರಳ ಭಾಷೆ ಮತ್ತು ಮನತಟ್ಟುವ ಸಂಭಾಷಣೆಗಳ ಮೂಲಕ ನಾಟಕ ಓದಿಸಿಕೊಂಡು ಹೋಗುತ್ತದೆ. ಕ್ರಾಂತಿಯ ಕೊನೆಯ ಮೂರು ರಾತ್ರಿಗಳ ಕುರಿತು ನಾಟಕ ವಿವರವಾಗಿ ಕಟ್ಟಿಕೊಡುತ್ತದೆ.