ಇವುಗಳ ನಾಯಕ ಅಥವಾ ಪ್ರಧಾನ ಪಾತ್ರದಾರಿ ‘ಕೃಷ್ಣಾಚಾರ್’ ಎಂಬ ಪುರೋಹಿತ. ಹಲಗೇರಿ ಹಳ್ಳಿಯ ಕೃಷ್ಣಾಚಾರ್ ಹನುಮಂತ ದೇವರ ಗುಡಿಯ ಅರ್ಚಕ. ವ್ಯಕ್ತಿತ್ವ, ಮಾತು, ಜಾಣ್ಮೆ, ನಗುವಿನ ಟಾನಿಕ್ನಿಂದಲೇ ಜನರಿಗೆ ಕೃಷ್ಣಾಚಾರ್ ಅಚ್ಚುಮೆಚ್ಚು. ಪುರೋಹಿತನಾಗಿದ್ದರೂ ಆ ಪಾತ್ರವೇ ವರ್ಣರಂಜಿತ. ‘ರೈಟ್ ರೈಟ್ ಯಂಕಣ್ಣ’, ‘ಕಾಕಪಿಂಡ’, ‘ಭೂ ಪ್ರಹಸನ’ದಲ್ಲಿ ಎದುರಾಗುವ ಪ್ರಸಂಗ, ಅದಕ್ಕೆ ಕೃಷ್ಣಾಚಾರ್ ಅವರ ಉಪಾಯ, ಪರಿಹಾರ ಪಾತ್ರಕ್ಕೆ ಜೀವ ತುಂಬುತ್ತವೆ. ಇಲ್ಲಿ ಹಾಸ್ಯ ಶೈಲಿಯ ಬರವಣಿಗೆಯಲ್ಲಿ ಲವಲವಿಕೆಯಿದೆ. ಕಥೆಯೊಳಗೆ ಕಥೆಗಳು ಅಡಗಿವೆ. ಕೃಷ್ಣಾಚಾರ್ ಪಾತ್ರದ ಪ್ರತೀ ಮಾತಿನಲ್ಲಿ ಆಲೋಚನೆಗಳಿಗೂ ಅವಕಾಶವಿದೆ.