ಕರಡಿ, ಕೋತಿ ಮತ್ತು ಹಾವಾಡಿಸುವ ನಿರ್ಲಕ್ಷಿತ ಸಮುದಾಯದ ವಿವರಗಳನ್ನು ಕ್ಷೇತ್ರಾಧ್ಯಯನದ ನೆಲೆಯಲ್ಲಿ ಹರೀಶ್ ಕುಮಾರ್ ಕಟ್ಟಿಕೊಟ್ಟಿದ್ದಾರೆ. ಮದಾರಿಗಳಿಗೂ ಮೊಹರಂಗೂ ಇರುವ ಅವಿನಾಭಾವ ಸಂಬಂಧ, ಕರಡಿ–ಮನುಷ್ಯ ಸಂಬಂಧದ ಕಥೆಗಳ ಜತೆಗೆ ನಾಗರಿಕತೆಯ ಸೋಗಲಾಡಿತನ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರ ‘ಮದಾರಿ’ಯಂಥ ಅಲೆಮಾರಿಗಳ ಬದುಕನ್ನು ಛಿದ್ರಗೊಳಿಸುತ್ತಿರುವ ವಿವರಗಳೂ ಇಲ್ಲಿವೆ.