ಯು.ಆರ್.ಅನಂತಮೂರ್ತಿ, ಬರಗೂರು ರಾಮಚಂದ್ರಪ್ಪ, ಹಿ.ಶಿ. ರಾಮಚಂದ್ರೇಗೌಡ, ಅರವಿಂದ ಮಾಲಗತ್ತಿ, ಎಸ್.ಜಿ. ಸಿದ್ದರಾಮಯ್ಯ ಅವರಂತಹ ಸಾಹಿತಿಗಳಲ್ಲದೆ, ಕೆ.ಆರ್.ರಮೇಶಕುಮಾರ್, ಬಿ.ಎಲ್. ಶಂಕರ್, ಬಿ.ಕೆ. ಚಂದ್ರಶೇಖರ್ ಅವರಂತಹ ಹಿರಿಯ ರಾಜಕಾರಣಿಗಳು ಬರೆದ ಬರಹಗಳು ಇಲ್ಲಿವೆ. ಕೃತಿಯಲ್ಲಿರುವ ಹಲವು ಕೋನಗಳು, ಮನಗೆದ್ದು ಮಾರು ಗೆದ್ದವರು, ಮಾಧ್ಯಮದವರು ಕಂಡಂತೆ ಮತ್ತು ಚಿತ್ರಸಂಪುಟ ಎಂಬ ನಾಲ್ಕು ಭಾಗಗಳಲ್ಲಿ ಮರಮೇಶ್ವರರ ವ್ಯಕ್ತಿತ್ವ ಹರಡಿಕೊಂಡಿದೆ.