ವ್ಯಾಸಭಾರತವು ಮೂಲ ಮಹಾಭಾರತವೆಂದು ಪ್ರಚಲಿತದಲ್ಲಿದೆ. ಲೇಖಕರೇ ಹೇಳಿರುವಂತೆ ಇದು ಮೂಲಕೃತಿಯ ಸರಳ ರೂಪ. ಒಟ್ಟು 18 ಪರ್ವಗಳಲ್ಲಿ (ಆದಿಪರ್ವದಿಂದ ಸ್ವರ್ಗಾರೋಹಣ ಪರ್ವ) ಬರುವ ಮಹಾಭಾರತದ ಕಥನಗಳನ್ನು ರುದ್ರಮೂರ್ತಿ ಶಾಸ್ತ್ರಿ ಹೊಸಗನ್ನಡದಲ್ಲಿ ಅಚ್ಚುಕಟ್ಟಾಗಿ ದಾಖಲಿಸಿದ್ದಾರೆ. ಮೂಲಕೃತಿಗೆ ಧಕ್ಕೆ ಭಾರದಂತೆ, ಜೊತೆಗೆ ಯಾವುದೇ ಕಥಾ ಭಾಗವನ್ನು ಬಿಡದೇ ಸಂಗ್ರಹಿಸಿಕೊಟ್ಟಿರುವ ಶ್ರಮ ಮೆಚ್ಚುವಂಥದ್ದು. ಪಾತ್ರಗಳ ಕಥೆಗಳನ್ನೂ, ಪ್ರಸಂಗಗಳನ್ನು ಆಸಕ್ತಿಯಿಂದ ಓದಿಸಿಕೊಂಡು ಹೋಗುವ ರೀತಿಯಲ್ಲಿರುವಂತೆ ಲೇಖಕರು ಎಚ್ಚರಿಕೆ ವಹಿಸಿದ್ದಾರೆ. ಕೃತಿಯ ಕೆಲವು ಕಡೆ ಇರುವ ರೇಖಾಚಿತ್ರಗಳು (ಕಲಾವಿದ ಸುಧಾರಕ ದರ್ಭೆ) ಕಥೆಗಳಿಗೆ ಶೋಭೆ ಮೂಡಿಸಿವೆ. ಮಹಾಭಾರತದ ಬಗ್ಗೆ ತಿಳಿದುಕೊಳ್ಳುವ ಆಸಕ್ತ ಓದುಗರಿಗೆ ಇದು ಉಪಯುಕ್ತ ಕೃತಿಯಾಗಬಲ್ಲದು.