ಈ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಕೂಚಿಪುಡಿ ಕುಟುಂಬದ ಗುರು ಮಹಾಂಕಾಳಿ ಸೂರ್ಯನಾರಾಯಣ ಶರ್ಮಾ ಗುಂಟೂರು, ಬೆಂಗಳೂರಿನ ಭರತನಾಟ್ಯ ಪಟು ಬದರಿ ದಿವ್ಯ ಭೂಷಣ್, ಅಮೆರಿಕದ ಕಾಸಿ ಐಸೊಲಾ ಅವರಿಂದ ಕೂಚಿಪುಡಿ ಸೋಲೋ ನೃತ್ಯ, ಲಕ್ಷ್ಮಿ ಬಾಬು ಬಂಗಾರು ಮತ್ತು ಸ್ನೇಹಾ ಬಾಬು ಗುರು ದೀಪಾ ನಾರಾಯಣನ್,ಅಪರ್ಣಾ ನಂಗಿಯಾರ್ ಅವರಿಂದ ಕೂಡಿಯಾಟ್ಟಂನ ವಿಶೇಷ ಪ್ರಸ್ತುತಿ, ಸಶೀಂದ್ರನ್ ಅವರ ಶಿಷ್ಯೆ ಸೋನು ಸತೀಶ್ ಕುಮಾರ್, ತೈವಾನ್ನಿಂದ ಕೈಚಿ ಲೊ, ಕೇರಳದಿಂದ ರೇಷ್ಮಾ ಯು. ರಾಜ್, ಕೆನಡಾದಿಂದ ಪ್ರಿಯಾಂಕಾ ಪಹರಿ ಅವರ ನೃತ್ಯ ಪ್ರದರ್ಶನವಿದೆ. ಹೈದರಾಬಾದ್ನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ದೀಪಿಕಾ ರೆಡ್ಡಿ ಅವರ ಸಮಾರೋಪ ಭಾಷಣವಿದೆ ಎಂದು ಪ್ರಕಟಣೆ ತಿಳಿಸಿದೆ.