ಅಧ್ಯಾಪಕನಾಗಿ, ಅಸಿಸ್ಟೆಂಟ್ ಕಮಿಷನರ್ ಆಗಿ, ಜಿಲ್ಲಾಧಿಕಾರಿಯಾಗಿ, ಸರ್ಕಾರದ ಕಾರ್ಯದರ್ಶಿಯಾಗಿ ವ್ಯಾಪಕವಾದ ಆಡಳಿತದ ಅನುಭವ ಹೊಂದಿದ ನಿವೃತ್ತ ಐಎಎಸ್ ಅಧಿಕಾರಿ ಟಿ. ತಿಮ್ಮೇಗೌಡರ ಆತ್ಮಕಥೆ ‘ನೆನಪಿನ ಹಾದಿಯಲ್ಲಿ’. ಸಾಮಾನ್ಯ ಕೃಷಿಕ ಕುಟುಂಬದಲ್ಲಿ ಜನಿಸಿ, ಸರ್ಕಾರದ ಉನ್ನತ ಹುದ್ದೆಗೆ ಏರುವವರೆಗಿನ ಯಾತ್ರೆಯನ್ನು ತಿಮ್ಮೇಗೌಡರು ದಾಖಲಿಸಿದ್ದಾರೆ.